<p><strong>ಮುಂಬೈ:</strong> ಮಹಾರಾಷ್ಟ್ರದಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದರಿಂದ ಈ ವಿಷಯವನ್ನು ಅಧಿವೇಶನದಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿತ್ತು.</p>.<p>ಈ ವೇಳೆ ಪಕ್ಷೇತರ ಶಾಸಕ ಓಂಪ್ರಕಾಶ್ ಬಾಬುರಾವಂ ಕಾಡು (ಬಚ್ಚು ಕಾಡು) ಅವರು ಮಾತನಾಡಿ, ಮಹಾರಾಷ್ಟ್ರದ ಬೀದಿನಾಯಿಗಳೆಲ್ಲವನ್ನು ಹಿಡಿದು ಅಸ್ಸಾಂಗೆ ಬಿಡಿ. ಅಲ್ಲಿ ನಾಯಿಗಳ ಮಾಂಸಕ್ಕೆ ತುಂಬಾ ಬೇಡಿಕೆ ಇದೆ. ಚಪ್ಪರಿಸಿಕೊಂಡು ತಿಂತಾರೆ ಎಂದು ಹೇಳಿದ್ದಾರೆ.</p>.<p>ಶಾಸಕರಾದ ಪ್ರತಾಪ್ ಸಾರಾನಾಯಿಕ್ ಹಾಗೂ ಅತುಲ್ ಭಟ್ಕಳಕರ್ ಅವರು ಬೀದಿ ನಾಯಿಗಳ ಸಮಸ್ಯೆಗೆ ಮಹಾರಾಷ್ಟ್ರ ಸರ್ಕಾರ ಶಾಶ್ವತವಾದ ಪರಿಹಾರ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.</p>.<p>ಈ ವೇಳೆ ಓಂಪ್ರಕಾಶ್ ಅವರು ಆವೇಶದಲ್ಲಿ ಬೀದಿನಾಯಿಗಳನ್ನು ಅಸ್ಸಾಂಗೆ ಕಳಿಸಬೇಕು. ಅಲ್ಲಿನ ಜನ ಮಾಂಸ ಪ್ರಿಯರು. ಒಂದು ಬಲಿತ ನಾಯಿ ₹8000 ದಿಂದ ₹9000ಕ್ಕೆ ಮಾರಾಟವಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಬಚ್ಚು ಅವರ ಈ ಸಲಹೆಯನ್ನು ಪ್ರಾಣಿ ಧಯಾ ಸಂಘಟನೆಗಳು ವಿರೋಧಿಸಿವೆ.</p>.<p>ಆದರೆ, ಇದಕ್ಕೆ ಸ್ಪೀಕರ್ ಸಹಮತ ಸೂಚಿಸಲಿಲ್ಲ. ಈ ಕುರಿತು ಇಂಡಿಯಾ ಟುಡೇ ವರದಿ ಮಾಡಿದೆ. ಓಂಪ್ರಕಾಶ್ ಬಾಬುರಾವಂ ಕಾಡು ಅವರು ಅತಲಪುರದ ಶಾಸಕರಾಗಿದ್ದಾರೆ.</p>.<p>ಕಳೆದ ತಿಂಗಳು ಹೈದರಾಬಾದ್ನಲ್ಲಿ ಬೀದಿನಾಯಿಗಳು 4 ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಮಗುವನ್ನು ಕಚ್ಚಿ ಕೊಂದಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<p><a href="https://www.prajavani.net/technology/social-media/kacha-badam-singer-bhuban-badyakar-struggles-and-he-cheated-about-youtube-copy-right-1021433.html" itemprop="url">ನಾನು ಮೋಸ ಹೋದೆ ಎಂದು ಕಣ್ಣೀರಿಟ್ಟ ‘ಕಚ್ಚಾ ಬಾದಾಮ್’ ಖ್ಯಾತಿಯ ಭುಬನ್ ಭಡ್ಯಾಕರ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮಹಾರಾಷ್ಟ್ರದಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದರಿಂದ ಈ ವಿಷಯವನ್ನು ಅಧಿವೇಶನದಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿತ್ತು.</p>.<p>ಈ ವೇಳೆ ಪಕ್ಷೇತರ ಶಾಸಕ ಓಂಪ್ರಕಾಶ್ ಬಾಬುರಾವಂ ಕಾಡು (ಬಚ್ಚು ಕಾಡು) ಅವರು ಮಾತನಾಡಿ, ಮಹಾರಾಷ್ಟ್ರದ ಬೀದಿನಾಯಿಗಳೆಲ್ಲವನ್ನು ಹಿಡಿದು ಅಸ್ಸಾಂಗೆ ಬಿಡಿ. ಅಲ್ಲಿ ನಾಯಿಗಳ ಮಾಂಸಕ್ಕೆ ತುಂಬಾ ಬೇಡಿಕೆ ಇದೆ. ಚಪ್ಪರಿಸಿಕೊಂಡು ತಿಂತಾರೆ ಎಂದು ಹೇಳಿದ್ದಾರೆ.</p>.<p>ಶಾಸಕರಾದ ಪ್ರತಾಪ್ ಸಾರಾನಾಯಿಕ್ ಹಾಗೂ ಅತುಲ್ ಭಟ್ಕಳಕರ್ ಅವರು ಬೀದಿ ನಾಯಿಗಳ ಸಮಸ್ಯೆಗೆ ಮಹಾರಾಷ್ಟ್ರ ಸರ್ಕಾರ ಶಾಶ್ವತವಾದ ಪರಿಹಾರ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.</p>.<p>ಈ ವೇಳೆ ಓಂಪ್ರಕಾಶ್ ಅವರು ಆವೇಶದಲ್ಲಿ ಬೀದಿನಾಯಿಗಳನ್ನು ಅಸ್ಸಾಂಗೆ ಕಳಿಸಬೇಕು. ಅಲ್ಲಿನ ಜನ ಮಾಂಸ ಪ್ರಿಯರು. ಒಂದು ಬಲಿತ ನಾಯಿ ₹8000 ದಿಂದ ₹9000ಕ್ಕೆ ಮಾರಾಟವಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಬಚ್ಚು ಅವರ ಈ ಸಲಹೆಯನ್ನು ಪ್ರಾಣಿ ಧಯಾ ಸಂಘಟನೆಗಳು ವಿರೋಧಿಸಿವೆ.</p>.<p>ಆದರೆ, ಇದಕ್ಕೆ ಸ್ಪೀಕರ್ ಸಹಮತ ಸೂಚಿಸಲಿಲ್ಲ. ಈ ಕುರಿತು ಇಂಡಿಯಾ ಟುಡೇ ವರದಿ ಮಾಡಿದೆ. ಓಂಪ್ರಕಾಶ್ ಬಾಬುರಾವಂ ಕಾಡು ಅವರು ಅತಲಪುರದ ಶಾಸಕರಾಗಿದ್ದಾರೆ.</p>.<p>ಕಳೆದ ತಿಂಗಳು ಹೈದರಾಬಾದ್ನಲ್ಲಿ ಬೀದಿನಾಯಿಗಳು 4 ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಮಗುವನ್ನು ಕಚ್ಚಿ ಕೊಂದಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<p><a href="https://www.prajavani.net/technology/social-media/kacha-badam-singer-bhuban-badyakar-struggles-and-he-cheated-about-youtube-copy-right-1021433.html" itemprop="url">ನಾನು ಮೋಸ ಹೋದೆ ಎಂದು ಕಣ್ಣೀರಿಟ್ಟ ‘ಕಚ್ಚಾ ಬಾದಾಮ್’ ಖ್ಯಾತಿಯ ಭುಬನ್ ಭಡ್ಯಾಕರ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>