ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮಿಳುನಾಡಿನ ಹಿರಿಯ ಬಿಜೆಪಿ ನಾಯಕ ಎಲ್.ಗಣೇಶನ್ ಅವರನ್ನು ಮಣಿಪುರದ ರಾಜ್ಯಪಾಲರನ್ನಾಗಿ ಭಾನುವಾರ ನೇಮಕ ಮಾಡಿದ್ದಾರೆ.
ʼಶ್ರೀ ಎಲ್. ಗಣೇಶನ್ ಅವರನ್ನು ಮಣಿಪುರ ರಾಜ್ಯಪಾಲರನ್ನಾಗಿ ನೇಮಿಸಲು ರಾಷ್ಟ್ರಪತಿಯವರು ಹರ್ಷಗೊಂಡಿದ್ದಾರೆʼ ಎಂದು ಕೋವಿಂದ್ ಅವರ ಮಾಧ್ಯಮ ಕಾರ್ಯದರ್ಶಿ ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಗಣೇಶನ್ ಅವರು ಮಣಿಪುರದ 17ನೇ ರಾಜ್ಯಪಾಲ ಎನಿಸಿದ್ದು, ಅವರು ನಜಾ ಹೆಫ್ತುಲ್ಲಾ ಅವರಿಂದ ತೆರವಾಗಿರುವ ಸ್ಥಾನ ತುಂಬಲಿದ್ದಾರೆ. ನಜ್ಮಾ ಹೆಪ್ತುಲ್ಲಾ ಅವರು ಈ ತಿಂಗಳ ಆರಂಭದಲ್ಲಿ ನಿವೃತ್ತರಾಗಿದ್ದರು. ಸಿಕ್ಕಿಂ ರಾಜ್ಯಪಾಲ ಗಂಗಾ ಪ್ರಸಾದ್ ಅವರಿಗೆ ಮಣಿಪುರದ ಹೆಚ್ಚುವರಿ ಹೊಣೆ ವಹಿಸಲಾಗಿತ್ತು.