‘ಸುವೇಂದು ಅಧಿಕಾರಿ ಗುರುವಾರ ಮಧ್ಯಾಹ್ನ 3.30ಕ್ಕೆ ಮಾಹಿತಿ ನೀಡದೇ ನನ್ನ ಗೃಹ ಕಚೇರಿಗೆ ಆಗಮಿಸಿದ್ದರು. ನಾನು ಆ ವೇಳೆ ಪೂರ್ವ ನಿರ್ಧರಿತ ಬೇರೆ ಸಭೆಯಲ್ಲಿದ್ದ ಕಾರಣ ನನ್ನ ಕಚೇರಿಯ ಸಿಬ್ಬಂದಿ ಅವರನ್ನು ನಿರೀಕ್ಷಣಾ ಕೊಠಡಿಯಲ್ಲಿ ಕಾಯುವುದಕ್ಕೆ ಹೇಳಿ, ಒಂದು ಕಪ್ ಚಹಾ ನೀಡಿದ್ದರು. ಸಭೆ ಮುಗಿದ ನಂತರ ನನ್ನ ಆಪ್ತ ಕಾರ್ಯದರ್ಶಿ ಸುವೇಂದು ಅವರು ಬಂದಿರುವ ಮಾಹಿತಿ ನೀಡಿದರು. ಆಗ ನಾನು ಅವರನ್ನು ಭೇಟಿಯಾಗಲು ಆಗದಿರುವುದನ್ನು ಅವರ ಗಮನಕ್ಕೆ ತಂದು, ಅವರನ್ನು ಕಾಯಿಸಿದ್ದಕ್ಕಾಗಿ ಕ್ಷಮೆಯಾಚಿಸಿರುವುದಾಗಿ ತಿಳಿಸಲು ನನ್ನ ಆಪ್ತಕಾರ್ಯದರ್ಶಿಯಲ್ಲಿ ವಿನಂತಿಸಿದೆ. ಸುವೇಂದು ಅವರು ನನ್ನ ಆಪ್ತ ಕಾರ್ಯದರ್ಶಿಗೆ ಧನ್ಯವಾದ ಅರ್ಪಿಸಿ, ನನ್ನನ್ನು ಭೇಟಿಯಾಗಲು ಒತ್ತಾಯಿಸದೆ ಹೊರಟುಹೋದರು ಎಂದು ತುಷಾರ್ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ.