ನವದೆಹಲಿ: ‘ಹಿಂದುತ್ವ ಚಳವಳಿಯು1947ರ ಮುಸ್ಲಿಂ ಕೋಮುವಾದದ ಪ್ರತಿಬಿಂಬವಿದ್ದಂತೆ. ಈ ಚಳವಳಿಯ ಗೆಲುವು ಭಾರತೀಯ ಕಲ್ಪನೆಯ ಅಂತ್ಯವನ್ನು ಸೂಚಿಸುತ್ತದೆ’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
‘ಹಿಂದೂ ಭಾರತವೆಂದರೆ ಅದು ಹಿಂದೂಗಳದ್ದಲ್ಲ. ಅದು ಸಂಘಿ ಹಿಂದುತ್ವ ರಾಷ್ಟ್ರ. ಇದು ಸಂಪೂರ್ಣವಾಗಿ ಭಿನ್ನವಾಗಿರುವ ದೇಶ’ ಎಂದು ತಾವು ಬರೆದಿರುವ ‘ದಿ ಬ್ಯಾಟಲ್ ಆಫ್ ಬಿಲಾಂಗಿಂಗ್’ ಪುಸ್ತಕದಲ್ಲಿ ತರೂರ್ ಹೇಳಿದ್ದಾರೆ.