ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವ ಚಳವಳಿಯ ಗೆಲುವು ಭಾರತೀಯ ಕಲ್ಪನೆಯ ಅಂತ್ಯದ ಸೂಚಕ: ಶಶಿ ತರೂರ್

Last Updated 31 ಅಕ್ಟೋಬರ್ 2020, 11:35 IST
ಅಕ್ಷರ ಗಾತ್ರ

ನವದೆಹಲಿ: ‘ಹಿಂದುತ್ವ ಚಳವಳಿಯು1947ರ ಮುಸ್ಲಿಂ ಕೋಮುವಾದದ ಪ್ರತಿಬಿಂಬವಿದ್ದಂತೆ. ಈ ಚಳವಳಿಯ ಗೆಲುವು ಭಾರತೀಯ ಕಲ್ಪನೆಯ ಅಂತ್ಯವನ್ನು ಸೂಚಿಸುತ್ತದೆ’ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅಭಿಪ್ರಾಯಪಟ್ಟಿದ್ದಾರೆ.

‘ಹಿಂದೂ ಭಾರತವೆಂದರೆ ಅದು ಹಿಂದೂಗಳದ್ದಲ್ಲ. ಅದು ಸಂಘಿ ಹಿಂದುತ್ವ ರಾಷ್ಟ್ರ. ಇದು ಸಂಪೂರ್ಣವಾಗಿ ಭಿನ್ನವಾಗಿರುವ ದೇಶ’ ಎಂದು ತಾವು ಬರೆದಿರುವ ‘ದಿ ಬ್ಯಾಟಲ್ ಆಫ್‌ ಬಿಲಾಂಗಿಂಗ್‌’ ಪುಸ್ತಕದಲ್ಲಿ ತರೂರ್‌ ಹೇಳಿದ್ದಾರೆ.

ಅಲೆಪ್‌ ಬುಕ್‌ ಕಂಪನಿಯು ಹೊರತಂದಿರುವ ಈ ಪುಸ್ತಕವನ್ನು ಶನಿವಾರ ಬಿಡುಗಡೆಗೊಳಿಸಲಾಯಿತು.

‘ನನ್ನಂತಹವರು ತಾವು ಪ್ರೀತಿಸುವ ಭಾರತವನ್ನು ಹಾಗೆಯೇ ಉಳಿಸಿಕೊಳ್ಳಲು ಬಯಸುತ್ತಾರೆ. ಈ ರಾಷ್ಟ್ರವನ್ನು ನಾವು ದ್ವೇಷಿಸುವ ಹಾಗೆ ಮಾರ್ಪಾಡು ಮಾಡಬೇಡಿ’ ಎಂದು ಅವರು ನುಡಿದಿದ್ದಾರೆ.

ಹಿಂದುತ್ವ ಸಿದ್ಧಾಂತ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT