<p><strong>ಲಖನೌ:</strong> ಉತ್ತರ ಪ್ರದೇಶದಲ್ಲಿ ಮಂಗಳವಾರ ಸುರಿದ ಮಳೆಗೆ 18 ಜಿಲ್ಲೆಗಳ ಸುಮಾರು 1,300 ಗ್ರಾಮಗಳು ಜಲಾವೃತಗೊಂಡಿವೆ. ಮಳೆ ಸಂಬಂಧಿತ ಅವಘಡಗಳಿಗೆ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.</p>.<p>ನಾಲ್ವರು ಭಾರಿ ಮಳೆಯಿಂದಾಗಿ, ಓರ್ವ ಸಿಡಿಲು ಬಡಿದು, ಮತ್ತೊರ್ವ ಹಾವು ಕಡಿತದಿಂದ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿಗ್ರಹ ಕಮಿಷನರ್ ಕಚೇರಿ ತಿಳಿಸಿದೆ.</p>.<p>ಬಲರಾಮ್ಪುರದಲ್ಲಿ 287, ಸಿದ್ಧರತ್ನಗರ್ನಲ್ಲಿ 129, ಗೋರಖಪುರದಲ್ಲಿ 120, ಶ್ರವಸ್ತಿಯಲ್ಲಿ 114, ಲಖಿಂಪುರ ಖೇರಿಯಲ್ಲಿ 86 ಮತ್ತು ಬಾರಾಬಂಕಿಯಲ್ಲಿ 82 ಗ್ರಾಮಗಳು ಮಳೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿವೆ ಎಂದು ಮಾಹಿತಿ ನೀಡಿದೆ.</p>.<p>ಸಿಎಂ ಯೋಗಿ ಆದಿತ್ಯನಾಥ್ ಅವರು ಮೃತ ವ್ಯಕ್ತಿಗಳ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಶೀಘ್ರದಲ್ಲೇ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಪಿಎಸಿಯನ್ನು ತುರ್ತಾಗಿ ಕಾರ್ಯಾಚರಣೆಗೆ ಇಳಿಯಲು ನಿರ್ದೇಶಿಸಿದ್ದಾರೆ.</p>.<p>ನಿರಂತರ ಮಳೆಯಿಂದಾಗಿ ಬದೌನ್ ಪ್ರದೇಶದಲ್ಲಿ ಗಂಗಾ ನದಿ, ಲಖಿಂಪುರ ಖೇರಿಯಲ್ಲಿ ಶಾರದ ನದಿ, ಬಾರಾಬಂಕಿಯಲ್ಲಿ ಗಾಗರಾ ನದಿ ಸೇರಿದಂತೆ ಹಲವು ಪ್ರಮುಖ ನದಿಗಳು ಅಪಾಯದ ಅಂಚಿನಲ್ಲಿ ಹರಿಯುತ್ತಿವೆ.</p>.<p><a href="https://www.prajavani.net/india-news/flood-in-uttar-pradesh-11-killed-in-rain-related-incidents-979188.html" itemprop="url">ಉತ್ತರ ಪ್ರದೇಶ: ಭಾರಿ ಮಳೆ, 900 ಗ್ರಾಮಗಳಲ್ಲಿ ಪ್ರವಾಹ, 11 ಸಾವು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಉತ್ತರ ಪ್ರದೇಶದಲ್ಲಿ ಮಂಗಳವಾರ ಸುರಿದ ಮಳೆಗೆ 18 ಜಿಲ್ಲೆಗಳ ಸುಮಾರು 1,300 ಗ್ರಾಮಗಳು ಜಲಾವೃತಗೊಂಡಿವೆ. ಮಳೆ ಸಂಬಂಧಿತ ಅವಘಡಗಳಿಗೆ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.</p>.<p>ನಾಲ್ವರು ಭಾರಿ ಮಳೆಯಿಂದಾಗಿ, ಓರ್ವ ಸಿಡಿಲು ಬಡಿದು, ಮತ್ತೊರ್ವ ಹಾವು ಕಡಿತದಿಂದ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿಗ್ರಹ ಕಮಿಷನರ್ ಕಚೇರಿ ತಿಳಿಸಿದೆ.</p>.<p>ಬಲರಾಮ್ಪುರದಲ್ಲಿ 287, ಸಿದ್ಧರತ್ನಗರ್ನಲ್ಲಿ 129, ಗೋರಖಪುರದಲ್ಲಿ 120, ಶ್ರವಸ್ತಿಯಲ್ಲಿ 114, ಲಖಿಂಪುರ ಖೇರಿಯಲ್ಲಿ 86 ಮತ್ತು ಬಾರಾಬಂಕಿಯಲ್ಲಿ 82 ಗ್ರಾಮಗಳು ಮಳೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿವೆ ಎಂದು ಮಾಹಿತಿ ನೀಡಿದೆ.</p>.<p>ಸಿಎಂ ಯೋಗಿ ಆದಿತ್ಯನಾಥ್ ಅವರು ಮೃತ ವ್ಯಕ್ತಿಗಳ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಶೀಘ್ರದಲ್ಲೇ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಪಿಎಸಿಯನ್ನು ತುರ್ತಾಗಿ ಕಾರ್ಯಾಚರಣೆಗೆ ಇಳಿಯಲು ನಿರ್ದೇಶಿಸಿದ್ದಾರೆ.</p>.<p>ನಿರಂತರ ಮಳೆಯಿಂದಾಗಿ ಬದೌನ್ ಪ್ರದೇಶದಲ್ಲಿ ಗಂಗಾ ನದಿ, ಲಖಿಂಪುರ ಖೇರಿಯಲ್ಲಿ ಶಾರದ ನದಿ, ಬಾರಾಬಂಕಿಯಲ್ಲಿ ಗಾಗರಾ ನದಿ ಸೇರಿದಂತೆ ಹಲವು ಪ್ರಮುಖ ನದಿಗಳು ಅಪಾಯದ ಅಂಚಿನಲ್ಲಿ ಹರಿಯುತ್ತಿವೆ.</p>.<p><a href="https://www.prajavani.net/india-news/flood-in-uttar-pradesh-11-killed-in-rain-related-incidents-979188.html" itemprop="url">ಉತ್ತರ ಪ್ರದೇಶ: ಭಾರಿ ಮಳೆ, 900 ಗ್ರಾಮಗಳಲ್ಲಿ ಪ್ರವಾಹ, 11 ಸಾವು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>