ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಲೇಜು ಪ್ರಾಂಶುಪಾಲ ರಾಮ ಶರ್ಮಾ ಅವರು, ‘ಮಾಂಸಾಹಾರ ನಿಷೇಧ ಆದೇಶವನ್ನು ಹಿಂಪಡೆಯುವುದಿಲ್ಲ. ಇದು ಆರ್ಯ ಸಮಾಜದ ಕಾಲೇಜು. ಕಾಲೇಜಿನಲ್ಲಿರುವ ಶೇ 90ರಷ್ಟು ವಿದ್ಯಾರ್ಥಿಗಳು ಸಸ್ಯಾಹಾರಿಗಳು. ಅವರೂ ಈ ಹಿಂದೆ ಮಾಂಸಾಹಾರ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟಿಸಿದ್ದರು’ ಎಂದು ತಿಳಿಸಿದ್ದಾರೆ.