‘ಪ್ರವಾಸದ ಸಂದರ್ಭದಲ್ಲಿ ವಿಭಿನ್ನ ರೀತಿಯ ಭೂದೃಶ್ಯಗಳು, ಮಂಜು ಆವರಿಸಿಕೊಂಡಿರುವ ಬೆಟ್ಟಗಳು, ನದಿಗಳ ನಾದ, ಹತ್ತಾರು ಪ್ರಾಣಿಗಳ ಸಂಚಾರ, ಜಲಮೂಲಗಳಲ್ಲಿ ವಾಸಿಸುವ ಜೀವಿಗಳನ್ನು ನೋಡುತ್ತಿದ್ದೆ. ಇವೆಲ್ಲವೂ ಅದ್ಭುತ ಲೋಕ. ಇವುಗಳನ್ನು ಸೃಷ್ಟಿಸಿದ ಕಲಾ ಜಾದೂಗಾರ ಯಾರು? ಇಂತಹ ಭೂಮಿಯನ್ನು ಸೃಷ್ಟಿಸಿದ್ದು ಯಾರು? ಎನ್ನುವ ಕುತೂಹಲ ಮೂಡುತ್ತಿತ್ತು. ನನಗೆ ಬಹಳಷ್ಟು ಆಶ್ಚರ್ಯವಾಗುತ್ತಿತ್ತು. ಇಂತಹ ರಮಣೀಯ ಸೌಂದರ್ಯವೇ ಪುಸ್ತಕ ರೂಪದಲ್ಲಿ ಅನಾವರಣಗೊಂಡಿತು. ನನ್ನ ಯುವ ಓದುಗರ ಜತೆ ನಿಸರ್ಗದ ಅದ್ಭುತ ಸಂಗತಿಗಳನ್ನು ಹಂಚಿಕೊಂಡಿದ್ದೇನೆ‘ ಎಂದು ಸುಧಾಮೂರ್ತಿ ಅವರು ಪುಸ್ತಕದ ಬಗ್ಗೆ ವಿವರಿಸಿದ್ದಾರೆ.