‘ದೇಶದಾದ್ಯಂತ ಈ ಕಲ್ಲುಗಳಿಗೆ ಬೇಡಿಕೆ ಇದೆ. ಕೇವಲ ರಾಮ ಮಂದಿರಕ್ಕೆ ಕಲ್ಲುಗಳ ಅಗತ್ಯವಿದೆ ಎಂದು ಡಿನೋಟಿಫೈ ಮಾಡುತ್ತಿಲ್ಲ. ಜತೆಗೆ, ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಅಲ್ಲಿ ಈಗ ಅರಣ್ಯವೇ ಉಳಿದುಕೊಂಡಿಲ್ಲ. ಅಭಯಾರಣ್ಯದಿಂದ ಈ ಪ್ರದೇಶವನ್ನು ಡಿನೋಟಿಫೈ ಮಾಡಿದರೆ ಸರ್ಕಾರಕ್ಕೂ ಆದಾಯ ಬರುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.