ಪ್ರಕರಣದ ವಿವರ: ಕೊಳವೆ ಬಾವಿ ಕೊರೆಯುವ ವಾಹನದಲ್ಲಿ ‘ಹೆಲ್ಪರ್’ ಆಗಿದ್ದ ತೇಜ್ ಸಿಂಗ್ ಎಂಬುವವರು, ಬಾವಿಯ ಮಣ್ಣಿನ ಕುಸಿತದ ಸಂದರ್ಭದಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಪರಿಹಾರಕ್ಕೆ ಸಂಬಂಧಿಸಿದಂತೆ ದಾಖಲಾದ ಅರ್ಜಿಯ ವಿಚಾರಣೆ ನಡೆಸಿದ ಕಾರ್ಮಿಕರ ಆಯುಕ್ತರು, ₹3,27,555 ಪರಿಹಾರ ಹಾಗೂ ಅಂತ್ಯ ಸಂಸ್ಕಾರದ ವೆಚ್ಚವಾಗಿ ₹2,500 ಪಾವತಿಸುವಂತೆ ಆದೇಶಿಸಿದರು. ಅಪಘಾತದ ದಿನಾಂಕದಿಂದ ಶೇ 18ರಷ್ಟು ಬಡ್ಡಿಯನ್ನುಮೃತರ ಕಾನೂನುಬದ್ಧ ವಾರಸುದಾರರಿಗೆ ನೀಡುವಂತೆ ಆದೇಶಿಸಲಾಗಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ ವಿಮಾ ಕಂಪನಿಯು ಅಪಘಾತದಲ್ಲಿ ಮೃತಪಟ್ಟವರು ‘ಹೆಲ್ಪರ್’ ಆಗಿದ್ದಾರೆ, ಆದರೆ ವಿಮಾ ರಕ್ಷಣೆ ಇರುವುದು ‘ಕ್ಲೀನರ್’ಗೆ ಎಂದು ವಾದಿಸಿತ್ತು. ಕಂಪನಿಯ ವಾದವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.