ಇಕ್ಬಾಲ್ ಉದ್ಯಾನದಲ್ಲಿ ಕಾಶ್ಮೀರ ಪಂಡಿತ, ಶ್ರೀನಗರದ ಪ್ರಮುಖ ಔಷಧ ಅಂಗಡಿ ಮಾಲೀಕ ಮಖಾನ್ ಲಾಲ್ ಬಿಂದ್ರೂ ಅವರ ಮೇಲೆ ಮಂಗಳವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದರು.1990ರಲ್ಲಿ ಭಯೋತ್ಪಾದಕ ಕೃತ್ಯಗಳು ಆರಂಭವಾದ ನಂತರ ಕಾಶ್ಮೀರದಿಂದ ವಲಸೆ ಹೋಗದೆ ಅಲ್ಲಿಯೇ ಉಳಿದಿದ್ದ ಕೆಲವೇ ಕಾಶ್ಮೀರ ಪಂಡಿತರಲ್ಲಿ ಬಿಂದ್ರೂ ಸಹ ಒಬ್ಬರು