ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಪ್ಪುರಂ ಜಿಲ್ಲೆಯ 18 ವರ್ಷದ ಯುವಕ ಶ್ರೀನಾಥ್ ಎಂಬಾತನನ್ನು ಬಂಧಿಸಲಾಗಿತ್ತು. ಈತನ ಮನೆ ಸಮೀಪದ ಪ್ರದೇಶದಲ್ಲಿದ್ದ 17 ವರ್ಷದ ಬಾಲಕಿ ಮಾಡಿದ ಆರೋಪದ ಕಾರಣಕ್ಕೆ ಪೊಲೀಸರು ಕಳೆದತಿಂಗಳು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಪೊಕ್ಸೊ ಕಾಯ್ದೆ ಅಡಿಯಲ್ಲಿ ಈ ಪ್ರಕರಣ ದಾಖಲಾಗಿದ್ದರಿಂದ ಯುವಕನಿಗೆ ಜಾಮೀನು ದೊರೆತಿರಲಿಲ್ಲ. ಆದರೆ, ತಾನು ತಪ್ಪು ಮಾಡಿಲ್ಲ ಎಂದು ಶ್ರೀನಾಥ್ ಪ್ರತಿಪಾದಿಸಿದ್ದ. ಹೀಗಾಗಿ, ಡಿಎನ್ಎ ಪರೀಕ್ಷೆ ಕೈಗೊಳ್ಳಲಾಗಿತ್ತು. ಬಾಲಕಿ ಗರ್ಭಿಣಿಯಾಗಲು ಶ್ರೀನಾಥ್ ಕಾರಣ ಅಲ್ಲ ಎನ್ನುವುದು ಪರೀಕ್ಷೆಯಲ್ಲಿ ಗೊತ್ತಾಗಿದ್ದರಿಂದ ನ್ಯಾಯಾಲಯ ಜಾಮೀನು ನೀಡಿದೆ.