ಈ ಬೆಳವಣಿಗೆ ಬೆನ್ನಲ್ಲೇ ಭಾನುವಾರ ಸುದ್ದಿಗೋಷ್ಠಿ ನಡೆಸಿರುವ ಜೈಸ್ವಾಲ್, ‘ಸರಿಯಾದ ಸಮಯದಲ್ಲೇ ಸಿಬಿಐ ಅಧಿಕಾರಿಗಳು, ತೇಜಸ್ವಿ ಅವರ ಜಾಮೀನು ರದ್ದುಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಹೋದ ತಿಂಗಳು ಸುದ್ದಿಗೋಷ್ಠಿ ನಡೆಸಿದ್ದ ತೇಜಸ್ವಿ, ರಾಯ್ ಅವರನ್ನು ಉದ್ದೇಶಿಸಿ ‘ಥಂಡಾ ಕರ್ ದೇಂಗೆ’ (ತಣ್ಣಗೆ ಮಾಡಿ ಬಿಡ್ತೀವಿ) ಎಂದು ಹೇಳಿದ್ದರು. ಈ ಮಾತಿನ ಅರ್ಥ ಏನು ಎಂಬುದು ಬಿಹಾರದ ಜನರಿಗೆ ಚೆನ್ನಾಗಿಯೇ ಗೊತ್ತು. ಯಾದವ್ ಅವರು ಸಿಬಿಐ ಅಧಿಕಾರಿಗಳಿಗೂ ಬಹಿರಂಗ ಬೆದರಿಕೆ ಹಾಕಿದ್ದರು’ ಎಂದು ಆರೋಪಿಸಿದ್ದಾರೆ.