ಹೈದರಾಬಾದ್ : ದೀಪಾವಳಿ ಸಂಭ್ರಮ ಆಚರಿಸಲು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರವಾಸ ತೆರಳಿದ್ದ ಯುವಜನರಲ್ಲಿ ಆರು ಮಂದಿ ನೀರಿನಲ್ಲಿ ಭಾನುವಾರ ಮುಳುಗಿ ಮೃತಪಟ್ಟಿದ್ದಾರೆ.
ಮುಲುಗು ಜಿಲ್ಲೆಯ ವೆಂಕಟಪುರಂ ಮಂಡಲ್ ಬಳಿ ಗೋದಾವರಿ ನದಿಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ. ನಿಜಾಂ ನಗರ್ ಅಣೆಕಟ್ಟೆ ಬಳಿ ನಡೆದ ಇನ್ನೊಂದು ಅವಘಡದಲ್ಲಿ 19 ವರ್ಷದ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.