<p><strong>ಚೆನ್ನೈ:</strong> ಪುದುಚೇರಿಯ ಆರೊವಿಲ್ಲೆಯಲ್ಲಿ ಜರ್ಮನ್ ದಂಪತಿ ಮನೆಯಲ್ಲಿ ಚೋಳರ ಕಾಲದ ಬಹುಕೋಟಿ ಮೌಲ್ಯದ ಮೂರು ವಿಗ್ರಹಗಳನ್ನು ತಮಿಳುನಾಡು ಸಿಐಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.</p>.<p>ನಟರಾಜ, ಅಮ್ಮನ್ ಮತ್ತು ಚಂದ್ರಶೇಖರ ಎಂಬ ಕಂಚಿನ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಐಡಿಯ ವಿಗ್ರಹ ಪತ್ತೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಈ ಪುರಾತನ ವಿಗ್ರಹಗಳು ಚೋಳರ ಕಾಲಕ್ಕೆ ಸೇರಿರಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಕೋಟಿ ಬೆಲೆ ಬಾಳುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಜರ್ಮನ್ ಪ್ರಜೆ ಮತ್ತು ಅವರ ಪತ್ನಿ ತಮ್ಮ ಮನೆಯ ಆವರಣದಲ್ಲಿ ವಸ್ತುಸಂಗ್ರಹಾಲಯ ಸ್ಥಾಪಿಸಲು ಯೋಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಭಾರತದಿಂದ ಜರ್ಮನಿಗೆ ಪುರಾತನ ವಿಗ್ರಹಗಳನ್ನು ಕಳ್ಳಸಾಗಣೆ ಮಾಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.</p>.<p>ಪೊಲೀಸರು ದಾಳಿ ಮಾಡಲು ಹೋದಾಗ ಜರ್ಮನ್ ಪ್ರಜೆಗಳು ವಿರೋಧಿಸಿದ್ದರು. ಆದರೆ, ನ್ಯಾಯಾಧೀಶರಿಂದ ವಾರಂಟ್ ತಂದು ಮಲಗುವ ಕೋಣೆ ತಪಾಸಣೆ ಮಾಡಿದಾಗ ವಿಗ್ರಹಗಳು ಪತ್ತೆಯಾದವು ಎಂದು ತಿಳಿಸಿದ್ದಾರೆ.</p>.<p><a href="https://www.prajavani.net/india-news/woman-run-over-by-vande-bharat-train-near-anand-in-gujarat-986877.html" itemprop="url">ಗುಜರಾತ್: ವಂದೇ ಭಾರತ್ ರೈಲು ಹರಿದು ಮಹಿಳೆ ಸಾವು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಪುದುಚೇರಿಯ ಆರೊವಿಲ್ಲೆಯಲ್ಲಿ ಜರ್ಮನ್ ದಂಪತಿ ಮನೆಯಲ್ಲಿ ಚೋಳರ ಕಾಲದ ಬಹುಕೋಟಿ ಮೌಲ್ಯದ ಮೂರು ವಿಗ್ರಹಗಳನ್ನು ತಮಿಳುನಾಡು ಸಿಐಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.</p>.<p>ನಟರಾಜ, ಅಮ್ಮನ್ ಮತ್ತು ಚಂದ್ರಶೇಖರ ಎಂಬ ಕಂಚಿನ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಐಡಿಯ ವಿಗ್ರಹ ಪತ್ತೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಈ ಪುರಾತನ ವಿಗ್ರಹಗಳು ಚೋಳರ ಕಾಲಕ್ಕೆ ಸೇರಿರಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಕೋಟಿ ಬೆಲೆ ಬಾಳುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಜರ್ಮನ್ ಪ್ರಜೆ ಮತ್ತು ಅವರ ಪತ್ನಿ ತಮ್ಮ ಮನೆಯ ಆವರಣದಲ್ಲಿ ವಸ್ತುಸಂಗ್ರಹಾಲಯ ಸ್ಥಾಪಿಸಲು ಯೋಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಭಾರತದಿಂದ ಜರ್ಮನಿಗೆ ಪುರಾತನ ವಿಗ್ರಹಗಳನ್ನು ಕಳ್ಳಸಾಗಣೆ ಮಾಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.</p>.<p>ಪೊಲೀಸರು ದಾಳಿ ಮಾಡಲು ಹೋದಾಗ ಜರ್ಮನ್ ಪ್ರಜೆಗಳು ವಿರೋಧಿಸಿದ್ದರು. ಆದರೆ, ನ್ಯಾಯಾಧೀಶರಿಂದ ವಾರಂಟ್ ತಂದು ಮಲಗುವ ಕೋಣೆ ತಪಾಸಣೆ ಮಾಡಿದಾಗ ವಿಗ್ರಹಗಳು ಪತ್ತೆಯಾದವು ಎಂದು ತಿಳಿಸಿದ್ದಾರೆ.</p>.<p><a href="https://www.prajavani.net/india-news/woman-run-over-by-vande-bharat-train-near-anand-in-gujarat-986877.html" itemprop="url">ಗುಜರಾತ್: ವಂದೇ ಭಾರತ್ ರೈಲು ಹರಿದು ಮಹಿಳೆ ಸಾವು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>