ಕೊಲ್ಕತ್ತಾ: ಅಸಮಾಧಾನಿತ ಶಾಸಕಿ ವೈಶಾಲಿ ದಾಲ್ಮಿಯಾ ಅವರನ್ನು ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷವು ಗುರುವಾರ ಪಕ್ಷದಿಂದ ಹೊರದಬ್ಬಿದೆ.
ಬ್ಯಾಲಿ ವಿಧಾನಸಭೆ ಕ್ಷೇತ್ರದ ಶಾಸಕಿಯಾದ ವೈಶಾಲಿ, ಟಿಎಂಸಿಯ ಕೆಲ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು. ಪಕ್ಷದಲ್ಲಿ ಪ್ರಾಮಾಣಿಕತೆಗೆ ಮತ್ತು ಪ್ರಾಮಾಣಿಕರಿಗೆ ಸ್ಥಾನವಿಲ್ಲ ಎಂದೂ ಅವರು ಹೇಳಿದ್ದರು.
ಟಿಎಂಸಿ ಶಿಸ್ತು ಸಮಿತಿ ಶುಕ್ರವಾರ ಸಭೆ ಸೇರಿ ದಾಲ್ಮಿಯಾ ಅವರನ್ನು ಪಕ್ಷದಿಂದ ಹೊರಹಾಕಲು ನಿರ್ಧರಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಟಿಎಂಸಿಯ ಹಿರಿಯ ಮುಖಂಡ ರಾಜೀವ್ ಬ್ಯಾನರ್ಜಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ವೈಶಾಲಿ ಅವರನ್ನು ಉಚ್ಚಾಟಿಸಲಾಗಿದೆ. ಬ್ಯಾನರ್ಜಿ ರಾಜೀನಾಮೆಗೆ ವೈಶಾಲಿ ಅವರು ಪಕ್ಷದ ನಾಯಕತ್ವದ ವಿರುದ್ಧ ದನಿಯೇರಿಸಿದ್ದರು.
ಪಕ್ಷ ತೊರೆಯುತ್ತಿರುವವರು ಮತ್ತು ಪಕ್ಷದ ವಿರುದ್ಧ ಅಸಮಾಧಾನ ಹೊಂದಿರುವವರಿಂದಾಗಿ ಆಡಳಿತಾರೂಢ ಟಿಎಂಸಿ ಸದ್ಯ ರಾಜಕೀಯದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ.