ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಎಂಸಿ ನಾಯಕನ ಮೇಲೆ ಗುಂಡಿನ ದಾಳಿ

Last Updated 11 ಮೇ 2021, 11:05 IST
ಅಕ್ಷರ ಗಾತ್ರ

ಚಿನ್‌ಸುರಾಹ್‌, ಪಶ್ಚಿಮ ಬಂಗಾಳ (ಪಿಟಿಐ): ಟಿಎಂಸಿ ನಾಯಕ,ಬನ್ಸ್‌ಬೆರಿಯಾ ನಗರಸಭೆಯ ಮಾಜಿ ಉಪಾಧ್ಯಕ್ಷ ಆದಿತ್ಯ ನಿಯೋಗಿ ಅವರ ಮೇಲೆ ಅಪರಿಚಿತರು ಮಂಗಳವಾರ ಹೂಗ್ಲಿ ಜಿಲ್ಲೆಯಲ್ಲಿ ಗುಂಡು ಹಾರಿಸಿದ್ದಾರೆ.

‘ತರಕಾರಿ ಖರೀದಿಸುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ನಂತರ, ವೈದ್ಯರ ಸಲಹೆಯಂತೆ ಕೋಲ್ಕತ್ತದ ಆಸ್ಪತ್ರೆಗೆ ಒಯ್ಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಟಿಎಂಸಿ ಪಕ್ಷದಲ್ಲಿನ ಆಂತರಿಕ ಕಲಹವೇ ಕಾರಣ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ಇದನ್ನು ಟಿಎಂಸಿ ಶಾಸಕ ತಪನ್‌ ದಾಸ್‌ಗುಪ್ತಾ ನಿರಾಕರಿಸಿರುವ, ‘ಬಿಜೆಪಿ ಕಾರ್ಯಕರ್ತರೇ ದಾಳಿ ನಡೆಸಿದ್ದಾರೆ’ ಎಂದಿದ್ದಾರೆ.

ಘಟನೆಯನ್ನು ಖಂಡಿಸಿ ಟಿಎಂಸಿ ಕಾರ್ಯಕರ್ತರು ಬನ್ಸ್‌ಬೇರಿಯಾ ನಗರ ವಿವಿಧೆಡೆ ಪ್ರತಿಭಟಿಸಿದರು. ದುಷ್ಕರ್ಮಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT