ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಒಡೆತನದ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ನ (ಎಸ್ವಿಬಿಸಿ) ಕನ್ನಡ ಹಾಗೂ ಹಿಂದಿ ವಾಹಿನಿಗಳು ಅಕ್ಟೋಬರ್ 11ರಂದು ಕಾರ್ಯಾರಂಭ ಮಾಡಲಿವೆ.
ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ಅಂದು ಈ ಎರಡು ಚಾನೆಲ್ಗಳಿಗೆ ಚಾಲನೆ ನೀಡುವರು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಟಿಟಿಡಿ ಶುಕ್ರವಾರ ತಿಳಿಸಿದೆ.