<p><strong>ಲಂಡನ್</strong>: ಕೋವಿಡ್–19 ನಿಯಂತ್ರಿಸಲು ಜಾರಿಗೊಳಿಸಿರುವ ಸಂಚಾರದ ನಿರ್ಬಂಧಗಳನ್ನು ಸಡಿಲಿಸುವಂತೆ ಕೋರಿ ಬರೆದಿದ್ದ ಪತ್ರವನ್ನು ಹಣಕಾಸು ಸಚಿವ ರಿಷಿ ಸುನಾಕ್ ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎನ್ನಲಾದ ಕುರಿತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>ಈಗಿರುವ ಹಣಕಾಸು ಖಾತೆಯನ್ನು ವಾಪಸ್ ಪಡೆದು ಆರೋಗ್ಯ ಖಾತೆ ನೀಡುವ ಮೂಲಕ ರಿಷಿ ಅವರಿಗೆ ಹಿಂಬಡ್ತಿ ನೀಡುವ ಎಚ್ಚರಿಕೆಯನ್ನು ಜಾನ್ಸನ್ ನೀಡಿದ್ದಾರೆ. ರಿಷಿ ಸುನಾಕ್ ಭಾರತ ಮೂಲದವರು.</p>.<p>‘ರಿಷಿ ಮುಂದಿನ ಆರೋಗ್ಯ ಸಚಿವರಾಗಬಹುದು. ಅಲ್ಲಿ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಹುದು’ ಎಂದು ಜಾನ್ಸನ್ ಅವರು ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<p>ದೇಶದ ಆರ್ಥಿಕತೆಗೆ ಧಕ್ಕೆಯಾಗುತ್ತಿರುವುದರಿಂದ ಸಂಚಾರದ ನಿರ್ಬಂಧಗಳನ್ನು ಸಡಿಲಗೊಳಿಸುವುದು ಅಗತ್ಯವಿದೆ ಎಂದು ರಿಷಿ ಸುನಾಕ್ ಅವರು ಕಳೆದ ವಾರ ಜಾನ್ಸನ್ ಅವರಿಗೆ ಪತ್ರ ಬರೆದಿದ್ದರು.</p>.<p>ಆದರೆ, ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾದ ಬಳಿಕವೇ ಜಾನ್ಸನ್ ಅವರಿಗೆ ಪತ್ರದ ವಿಷಯ ಗಮನಕ್ಕೆ ಬಂದಿದೆ ಎಂದು ‘ಸಂಡೇ ಟೈಮ್ಸ್’ ವರದಿ ಮಾಡಿದೆ</p>.<p>ಪ್ರಧಾನಿ ಮತ್ತು ಹಣಕಾಸು ಸಚಿವರ ಭಿನ್ನಮತದ ಬಗ್ಗೆ ಹಲವು ದಿನಗಳಿಂದ ವರದಿಯಾಗುತ್ತಿದೆ. ಆದರೆ, ಸಚಿವ ಸಂಪುಟ ಪುನರ್ ರಚನೆ ಸದ್ಯಕ್ಕೆ ಇಲ್ಲ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್</strong>: ಕೋವಿಡ್–19 ನಿಯಂತ್ರಿಸಲು ಜಾರಿಗೊಳಿಸಿರುವ ಸಂಚಾರದ ನಿರ್ಬಂಧಗಳನ್ನು ಸಡಿಲಿಸುವಂತೆ ಕೋರಿ ಬರೆದಿದ್ದ ಪತ್ರವನ್ನು ಹಣಕಾಸು ಸಚಿವ ರಿಷಿ ಸುನಾಕ್ ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎನ್ನಲಾದ ಕುರಿತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>ಈಗಿರುವ ಹಣಕಾಸು ಖಾತೆಯನ್ನು ವಾಪಸ್ ಪಡೆದು ಆರೋಗ್ಯ ಖಾತೆ ನೀಡುವ ಮೂಲಕ ರಿಷಿ ಅವರಿಗೆ ಹಿಂಬಡ್ತಿ ನೀಡುವ ಎಚ್ಚರಿಕೆಯನ್ನು ಜಾನ್ಸನ್ ನೀಡಿದ್ದಾರೆ. ರಿಷಿ ಸುನಾಕ್ ಭಾರತ ಮೂಲದವರು.</p>.<p>‘ರಿಷಿ ಮುಂದಿನ ಆರೋಗ್ಯ ಸಚಿವರಾಗಬಹುದು. ಅಲ್ಲಿ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಹುದು’ ಎಂದು ಜಾನ್ಸನ್ ಅವರು ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<p>ದೇಶದ ಆರ್ಥಿಕತೆಗೆ ಧಕ್ಕೆಯಾಗುತ್ತಿರುವುದರಿಂದ ಸಂಚಾರದ ನಿರ್ಬಂಧಗಳನ್ನು ಸಡಿಲಗೊಳಿಸುವುದು ಅಗತ್ಯವಿದೆ ಎಂದು ರಿಷಿ ಸುನಾಕ್ ಅವರು ಕಳೆದ ವಾರ ಜಾನ್ಸನ್ ಅವರಿಗೆ ಪತ್ರ ಬರೆದಿದ್ದರು.</p>.<p>ಆದರೆ, ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾದ ಬಳಿಕವೇ ಜಾನ್ಸನ್ ಅವರಿಗೆ ಪತ್ರದ ವಿಷಯ ಗಮನಕ್ಕೆ ಬಂದಿದೆ ಎಂದು ‘ಸಂಡೇ ಟೈಮ್ಸ್’ ವರದಿ ಮಾಡಿದೆ</p>.<p>ಪ್ರಧಾನಿ ಮತ್ತು ಹಣಕಾಸು ಸಚಿವರ ಭಿನ್ನಮತದ ಬಗ್ಗೆ ಹಲವು ದಿನಗಳಿಂದ ವರದಿಯಾಗುತ್ತಿದೆ. ಆದರೆ, ಸಚಿವ ಸಂಪುಟ ಪುನರ್ ರಚನೆ ಸದ್ಯಕ್ಕೆ ಇಲ್ಲ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>