ಆಜಂ ಖಾನ್ ಸೋಮವಾರ ಸಂಜೆ ಪ್ರಗತಿಶೀಲ ಸಮಾಜವಾದಿ ಪಾರ್ಟಿ ಲೊಹಿಯಾ(ಪಿಎಸ್ಪಿಎಲ್) ಸಂಸ್ಥಾಪಕ ಶಿವಪಾಲ್ ಯಾದವ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಕುರಿತು ಚರ್ಚಿಸಿದರು. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆಜಂ ಖಾನ್ ಅವರು ತಮ್ಮ ವಕೀಲ ಕಬೀಲ್ ಸಿಬಿಲ್ಗೆ ಎಸ್ಪಿಯಿಂದ ರಾಜ್ಯಸಭಾಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ವಿಚಾರದ ಬಗ್ಗೆ ಆಜಂ ಖಾನ್ ಮತ್ತು ಎಸ್ಪಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.