ಮುಖ್ತಾರ್ ಅನ್ಸಾರಿಯನ್ನು ಅಭ್ಯರ್ಥಿ ಎಂದು ಘೋಷಿಸಿದ್ದಾಗ ಬಿಜೆಪಿ ಮತ್ತು ಬಿಎಸ್ಪಿ, ‘ಮುಖ್ತಾರ್ ಅನ್ಸಾರಿ ಗೆದ್ದರೆ, ರಾಜ್ಯದಲ್ಲಿ ಮತ್ತೆ ಮಾಫಿಯಾ ರಾಜ್ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಮಉ ಕ್ಷೇತ್ರವನ್ನು ಮತ್ತು ಆ ಮೂಲಕ ರಾಜ್ಯವನ್ನು ಮಾಫಿಯಾ ರಾಜ್ನಿಂದ ಸ್ವತಂತ್ರಗೊಳಿಸಿ’ ಎಂದು ಪದೇ ಪದೇ ಹೇಳುತ್ತಿದ್ದರು. ಹೀಗಾಗಿ ಮುಖ್ತಾರ್ ಬದಲಿಗೆ ಅವರ ಮಗನನ್ನು ಕಣಕ್ಕೆ ಇಳಿಸಲಾಯಿತು. ಹೀಗಿದ್ದೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಭಾಷಣಗಳಲ್ಲಿ ಈ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ.