ಈ ಕುರಿತ ವಿಡಿಯೊವನ್ನು ಕಿಸಾನ್ ಏಕತಾ ಮಂಚ್ ಟ್ವೀಟ್ ಮಾಡಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹೋರಾಡುವಾಗ ಸೈನಿ ಅವರು ಆ ಹೋರಾಟವನ್ನು ಲೇವಡಿ ಮಾಡಿದ್ದರು. ಲಖಿಂಪುರ ಖೇರಿ ಪ್ರಕರಣದಲ್ಲಿ ರೈತರ ಪರವಾಗಿ ಅವರು ಒಂದು ಮಾತನ್ನೂ ಹೇಳಿಲ್ಲ. ಹೀಗಿದ್ದೂ ಅವರು ಮತ ಕೇಳಲು ರೈತರ ಮುಂದೆ ಬಂದಿದ್ದಾರೆ. ಅವರ ಸ್ಥಾನ ಯಾವುದು ಎಂಬುದನ್ನು ನಾವು ಅವರಿಗೆ ತೋರಿಸಿ ದ್ದೇವೆ’ ಎಂದು ಸ್ಥಳದಲ್ಲಿದ್ದ ರೈತರು ಹೇಳಿದ್ದಾರೆ.