ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಟಿಹ್ರಿ ಅಣೆಕಟ್ಟು ಪ್ರದೇಶದಿಂದ ಸ್ಥಳಾಂತರ ಆದವರು ಈಗಲೂ ತೊಂದರೆಯಲ್ಲೇ ಇರುವುದು ದುರದೃಷ್ಟಕರ. ಜನರು ನಮ್ಮನ್ನು ಚುನಾಯಿಸಿದರೆ ನಾವು ಅವರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಟಿಹ್ರಿ ಅಣೆಕಟ್ಟಿನ ಆದಾಯದಲ್ಲಿ ₹1,100 ಕೋಟಿಯು ಉತ್ತರ ಪ್ರದೇಶಕ್ಕೆ ಹೋಗುತ್ತಿದೆ. ಅದು ಉತ್ತರಾಖಂಡಕ್ಕೆ ದೊರಕುವಂತೆ ಮಾಡುತ್ತೇವೆ. ಅದೇ ಹಣದಲ್ಲಿ 300 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ಎಲ್ಲಾ ಮನೆಗಳಿಗೆ ನೀಡುತ್ತೇವೆ’ ಎಂದರು.