ಬೃಂದಾವನದ ಮೋಹಿನಿ ಬಿಹಾರಿ ಶರಣ್ ಮಹಾರಾಜ್ ಮಾತನಾಡಿ, ಈ ರೀತಿಯ ನೃತ್ಯವು ಇಡೀ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ರಾಧಾ ರಾಣಿಯ ಹೆಸರಿನಲ್ಲಿ ಪ್ರಚಾರ ಪಡೆಯಲು ಈ ರೀತಿಯ ಹೀನ ಕೃತ್ಯ ಎಸಗಲಾಗಿದೆ. ಈ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿಲ್ಲವಾದರೆ ನಾವು ನ್ಯಾಯಾಲಯಕ್ಕೆ ತೆರಳುತ್ತೇವೆ ಎಂದು ತಿಳಿಸಿದ್ದಾರೆ.