<p><strong>ನವದೆಹಲಿ: </strong>ಕೇಂದ್ರ ಜಲಶಕ್ತಿ ಸಚಿವಾಲಯವು ಟ್ವಿಟರ್ನಲ್ಲಿ ನೀರಿನ ಸಂರಕ್ಷಣೆಯ ಮಹತ್ವವನ್ನು ಸಾರುವ ವಿಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಆನೆಯು ಕೈಪಂಪ್ ಒತ್ತುವ ಮೂಲಕ ನೀರನ್ನು ಸಂಗ್ರಹಿಸಿ ದಾಹ ತಣಿಸಿಕೊಳ್ಳುವ ದೃಶ್ಯವಿದೆ.</p>.<p>ದಾಹವಾಗಿದ್ದ ಆನೆಗೆ ಬಹುಶಃ ಕೆರೆ, ಕಟ್ಟೆಗಳಂತಹ ನೈಸರ್ಗಿಕ ಜಲಮೂಲಗಳಿಂದ ನೀರು ಸಿಕ್ಕಿಲ್ಲ. ಹಾಗಾಗಿ, ಅನಿವಾರ್ಯವಾಗಿ ಹ್ಯಾಂಡ್ ಪಂಪ್ ಬಳಸಿ ಅಂತರ್ಜಲವನ್ನು ಪಡೆಯುವ ಯತ್ನ ನಡೆಸಿದೆ.</p>.<p>ಆ ಹೋರಾಟವು ಆನೆಗೆ ಪ್ರತಿ ಹನಿಯ ನೀರಿನ ಪ್ರಾಮುಖ್ಯತೆಯ ಅರಿವು ಮೂಡಿಸಿದೆ. ಹಾಗಾಗಿ, ತನ್ನ ಬಾಯಾರಿಕೆ ನೀಗಲು ಸಾಕಾಗುವಷ್ಟು ನೀರನ್ನು ಮಾತ್ರ ಪಂಪ್ ಮಾಡಿದೆ. ತನ್ನ ಸೊಂಡಿಲ ಮೂಲಕ ನೀರನ್ನು ಸಂಗ್ರಹಿಸಿ ಕುಡಿದು ದಾಹ ತಣಿಸಿಕೊಂಡಿದೆ.</p>.<p>ನೀರನ್ನು ಸಂರಕ್ಷಿಸಿ ಇಲ್ಲವೆ ನೈಸರ್ಗಿಕ ನೀರಿನ ಮೂಲವನ್ನು ಹುಡುಕಲು ಹೆಣಗಾಡಲು ಸಿದ್ಧರಾಗಿರಿ ಎಂಬುದು ಸಚಿವಾಲಯದ ಸಂದೇಶವಾಗಿದೆ.</p>.<p>ಆನೆಯು ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಪಂಪ್ ಮಾಡಲಿಲ್ಲ, ಇದರರ್ಥ, ನೀರನ್ನು ವ್ಯರ್ಥ ಮಾಡಬಾರದು ಎಂಬುದಾಗಿದೆ. ಅನಗತ್ಯವಾಗಿ ನಲ್ಲಿಗಳನ್ನು ಆನ್ ಮಾಡಿಟ್ಟು ನೀರು ಪೋಲು ಮಾಡುವ ಜನರಿಗೆ ಇದು ಪಾಠವಾಗಿದೆ.</p>.<p>‘ಆನೆಯೂ ಕೂಡ ಪ್ರತಿ ಹನಿ ನೀರಿನ ಮಹತ್ವವನ್ನು ಅರ್ಥಮಾಡಿಕೊಂಡಿದೆ. ಹಾಗಾದರೆ, ಮಾನವರಾದ ನಾವು ಈ ಅಮೂಲ್ಯವಾದ ಸಂಪನ್ಮೂಲವನ್ನು ಏಕೆ ವ್ಯರ್ಥ ಮಾಡುತ್ತೇವೆ’ಎಂದು ಸಚಿವಾಲಯವು ಹಿಂದಿಯಲ್ಲಿ ಟ್ವೀಟ್ ಮಾಡಿದೆ. ಜನರು ಆನೆಯ ಕಾಳಜಿಯನ್ನು ಅರ್ಥ ಮಾಡಿಕೊಂಡು ನೀರನ್ನು ಸಂರಕ್ಷಿಸಲು ಪ್ರಾರಂಭಿಸುವಂತೆ ಅದು ಒತ್ತಾಯಿಸಿದೆ.</p>.<p>ಸಚಿವಾಲಯದ ಈ ಪೋಸ್ಟ್ ಇದುವರೆಗೆ 17,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕೇಂದ್ರ ಜಲಶಕ್ತಿ ಸಚಿವಾಲಯವು ಟ್ವಿಟರ್ನಲ್ಲಿ ನೀರಿನ ಸಂರಕ್ಷಣೆಯ ಮಹತ್ವವನ್ನು ಸಾರುವ ವಿಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಆನೆಯು ಕೈಪಂಪ್ ಒತ್ತುವ ಮೂಲಕ ನೀರನ್ನು ಸಂಗ್ರಹಿಸಿ ದಾಹ ತಣಿಸಿಕೊಳ್ಳುವ ದೃಶ್ಯವಿದೆ.</p>.<p>ದಾಹವಾಗಿದ್ದ ಆನೆಗೆ ಬಹುಶಃ ಕೆರೆ, ಕಟ್ಟೆಗಳಂತಹ ನೈಸರ್ಗಿಕ ಜಲಮೂಲಗಳಿಂದ ನೀರು ಸಿಕ್ಕಿಲ್ಲ. ಹಾಗಾಗಿ, ಅನಿವಾರ್ಯವಾಗಿ ಹ್ಯಾಂಡ್ ಪಂಪ್ ಬಳಸಿ ಅಂತರ್ಜಲವನ್ನು ಪಡೆಯುವ ಯತ್ನ ನಡೆಸಿದೆ.</p>.<p>ಆ ಹೋರಾಟವು ಆನೆಗೆ ಪ್ರತಿ ಹನಿಯ ನೀರಿನ ಪ್ರಾಮುಖ್ಯತೆಯ ಅರಿವು ಮೂಡಿಸಿದೆ. ಹಾಗಾಗಿ, ತನ್ನ ಬಾಯಾರಿಕೆ ನೀಗಲು ಸಾಕಾಗುವಷ್ಟು ನೀರನ್ನು ಮಾತ್ರ ಪಂಪ್ ಮಾಡಿದೆ. ತನ್ನ ಸೊಂಡಿಲ ಮೂಲಕ ನೀರನ್ನು ಸಂಗ್ರಹಿಸಿ ಕುಡಿದು ದಾಹ ತಣಿಸಿಕೊಂಡಿದೆ.</p>.<p>ನೀರನ್ನು ಸಂರಕ್ಷಿಸಿ ಇಲ್ಲವೆ ನೈಸರ್ಗಿಕ ನೀರಿನ ಮೂಲವನ್ನು ಹುಡುಕಲು ಹೆಣಗಾಡಲು ಸಿದ್ಧರಾಗಿರಿ ಎಂಬುದು ಸಚಿವಾಲಯದ ಸಂದೇಶವಾಗಿದೆ.</p>.<p>ಆನೆಯು ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಪಂಪ್ ಮಾಡಲಿಲ್ಲ, ಇದರರ್ಥ, ನೀರನ್ನು ವ್ಯರ್ಥ ಮಾಡಬಾರದು ಎಂಬುದಾಗಿದೆ. ಅನಗತ್ಯವಾಗಿ ನಲ್ಲಿಗಳನ್ನು ಆನ್ ಮಾಡಿಟ್ಟು ನೀರು ಪೋಲು ಮಾಡುವ ಜನರಿಗೆ ಇದು ಪಾಠವಾಗಿದೆ.</p>.<p>‘ಆನೆಯೂ ಕೂಡ ಪ್ರತಿ ಹನಿ ನೀರಿನ ಮಹತ್ವವನ್ನು ಅರ್ಥಮಾಡಿಕೊಂಡಿದೆ. ಹಾಗಾದರೆ, ಮಾನವರಾದ ನಾವು ಈ ಅಮೂಲ್ಯವಾದ ಸಂಪನ್ಮೂಲವನ್ನು ಏಕೆ ವ್ಯರ್ಥ ಮಾಡುತ್ತೇವೆ’ಎಂದು ಸಚಿವಾಲಯವು ಹಿಂದಿಯಲ್ಲಿ ಟ್ವೀಟ್ ಮಾಡಿದೆ. ಜನರು ಆನೆಯ ಕಾಳಜಿಯನ್ನು ಅರ್ಥ ಮಾಡಿಕೊಂಡು ನೀರನ್ನು ಸಂರಕ್ಷಿಸಲು ಪ್ರಾರಂಭಿಸುವಂತೆ ಅದು ಒತ್ತಾಯಿಸಿದೆ.</p>.<p>ಸಚಿವಾಲಯದ ಈ ಪೋಸ್ಟ್ ಇದುವರೆಗೆ 17,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>