ಮುಂಬೈ (ಪಿಟಿಐ): ರಾಜ್ಯದ ಜಲಾಶಯಗಳಲ್ಲಿ ಪ್ರಸ್ತುತ ಶೇಕಡ 37ರಷ್ಟು ನೀರಿನ ಸಂಗ್ರಹವಿದ್ದು, ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಪ್ರದೇಶಗಳಿಗೆ 401 ಟ್ಯಾಂಕರ್ಗಳು ನೀರನ್ನು ಸರಬರಾಜು ಮಾಡುತ್ತಿವೆ ಎಂದು ಮಹಾರಾಷ್ಟ್ರದ ಸರ್ಕಾರ ತಿಳಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಕಚೇರಿ ‘ಸಾರ್ವಜನಿಕರಿಗೆ ನಿರಂತರವಾದ ನೀರು ಪೂರೈಕೆ ಹಾಗೂ ವಿತರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರತವಾಗಿದೆ’ ಎಂದು ತಿಳಿಸಿದೆ.
‘ರಾಜ್ಯದಾದ್ಯಂತ 455 ಗ್ರಾಮಗಳಿಗೆ ಹಾಗೂ 1,001 ಕುಗ್ರಾಮಗಳಿಗೆ ಒಟ್ಟು 401 ಟ್ಯಾಂಕರ್ಗಳ ಮೂಲಕ ನೀರನ್ನು ಪೂರೈಸಲಾಗಿದೆ. ಇಲ್ಲಿಯವರೆಗೆ ನಾಗಪುರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಅಗತ್ಯ ಎದುರಾಗಿಲ್ಲ’ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.