ಎಂಎಸ್ಪಿಗೆ ಸಂಬಂಧಿಸಿ ಸಮಿತಿ ರಚಿಸುವ ಭರವಸೆಯನ್ನು ಸರ್ಕಾರ ಈಡೇರಿಸುತ್ತಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಇತ್ತೀಚೆಗೆ ಟೀಕೆ ಮಾಡಿತ್ತು. ಈ ಕಾರಣಕ್ಕೆ, ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಂತೆ ಮತದಾರರಿಗೆ ತಿಳಿಸುವ ಸಲುವಾಗಿ ‘ಮಿಷನ್ ಉತ್ತರಪ್ರದೇಶ’ ಆಂದೋಲನ ನಡೆಸುವುದಾಗಿಯೂ ಮೋರ್ಚಾ ಹೇಳಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರದಿಂದ ಈ ಹೇಳಿಕೆ ಹೊರಬಿದ್ದಿದೆ.