<p><strong>ನವದೆಹಲಿ</strong>: ‘ಲಾ ನಿನೊ‘ ಪರಿಸ್ಥಿತಿ ಚಾಲ್ತಿಯಲ್ಲಿರುವ ಕಾರಣ ಈ ಬಾರಿಯ ಚಳಿಗಾಲವು ಮತ್ತಷ್ಟು ಶೀತದಿಂದ ಕೂಡಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ(ಐಎಂಡಿ) ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ಬುಧವಾರ ಹೇಳಿದರು.</p>.<p>ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯೋಜಿಸಿದ್ದ ‘ಕೋಲ್ಡ್ ವೇವ್ ರಿಸ್ಕ್ ರಿಡಕ್ಷನ್’ ಎಂಬ ವಿಷಯದ ವೆಬಿನಾರ್ ನಲ್ಲಿಮಾತನಾಡಿದ ಅವರು, ‘ಹವಾಮಾನ ಬದಲಾವಣೆಯಿಂದ ಉಷ್ಣಾಂಶ ಹೆಚ್ಚಾಗುತ್ತದೆ ಎಂಬ ಕಲ್ಪನೆಯಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ, ಲಾನಿನೊ ಪರಿಸ್ಥಿತಿಯಿಂದಾಗಿ ಹವಾಮಾನ ಬದಲಾವಣೆಯಾಗುತ್ತಿದ್ದು, ಚಳಿ ಹೆಚ್ಚಾಗಲಿದೆ’ ಎಂದು ಹೇಳಿದರು.</p>.<p>‘ಲಾ ನಿನೊಪರಿಸ್ಥಿತಿ ದುರ್ಬಲವಾಗುತ್ತಿದ್ದು, ಈ ವರ್ಷ ಅತಿಯಾದ ಚಳಿಗಾಲವಾಗಬಹುದೆಂದು ಅಂದಾಜಿಸಿದ್ದೇವೆ.ಎಲ್ನಿನೊ ಮತ್ತು ಲಾನಿನೊ ಪರಿಸ್ಥಿತಿಯ ವ್ಯತ್ಯಾಸದಿಂದ ಜಾಗತಿಕ ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಲಾನಿನೊ ಪರಿಸ್ಥಿತಿಯು ಶೀತ ಹವಾಮಾನಕ್ಕೆ ಅನೂಕೂಲಕರವಾಗಿದೆ. ಅದೇ ಎಲ್ನಿನೊ ಪರಿಸ್ಥಿತಿ ಪ್ರತಿಕೂಲವಾಗಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಲಾ ನಿನೊ‘ ಪರಿಸ್ಥಿತಿ ಚಾಲ್ತಿಯಲ್ಲಿರುವ ಕಾರಣ ಈ ಬಾರಿಯ ಚಳಿಗಾಲವು ಮತ್ತಷ್ಟು ಶೀತದಿಂದ ಕೂಡಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ(ಐಎಂಡಿ) ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ಬುಧವಾರ ಹೇಳಿದರು.</p>.<p>ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯೋಜಿಸಿದ್ದ ‘ಕೋಲ್ಡ್ ವೇವ್ ರಿಸ್ಕ್ ರಿಡಕ್ಷನ್’ ಎಂಬ ವಿಷಯದ ವೆಬಿನಾರ್ ನಲ್ಲಿಮಾತನಾಡಿದ ಅವರು, ‘ಹವಾಮಾನ ಬದಲಾವಣೆಯಿಂದ ಉಷ್ಣಾಂಶ ಹೆಚ್ಚಾಗುತ್ತದೆ ಎಂಬ ಕಲ್ಪನೆಯಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ, ಲಾನಿನೊ ಪರಿಸ್ಥಿತಿಯಿಂದಾಗಿ ಹವಾಮಾನ ಬದಲಾವಣೆಯಾಗುತ್ತಿದ್ದು, ಚಳಿ ಹೆಚ್ಚಾಗಲಿದೆ’ ಎಂದು ಹೇಳಿದರು.</p>.<p>‘ಲಾ ನಿನೊಪರಿಸ್ಥಿತಿ ದುರ್ಬಲವಾಗುತ್ತಿದ್ದು, ಈ ವರ್ಷ ಅತಿಯಾದ ಚಳಿಗಾಲವಾಗಬಹುದೆಂದು ಅಂದಾಜಿಸಿದ್ದೇವೆ.ಎಲ್ನಿನೊ ಮತ್ತು ಲಾನಿನೊ ಪರಿಸ್ಥಿತಿಯ ವ್ಯತ್ಯಾಸದಿಂದ ಜಾಗತಿಕ ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಲಾನಿನೊ ಪರಿಸ್ಥಿತಿಯು ಶೀತ ಹವಾಮಾನಕ್ಕೆ ಅನೂಕೂಲಕರವಾಗಿದೆ. ಅದೇ ಎಲ್ನಿನೊ ಪರಿಸ್ಥಿತಿ ಪ್ರತಿಕೂಲವಾಗಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>