<p class="title"><strong>ದ್ವಾರಕಾ (ಗುಜರಾತ್):</strong> ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಕರಾವಳಿ ಭ್ರದ್ರತಾ ಪಡೆಯನ್ನು ಬಲಿಷ್ಠ ಮತ್ತು ಅಭೇದ್ಯಗೊಳಿಸುವತ್ತ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದರು.</p>.<p class="title">ಗುಜರಾತ್ನ ದ್ವಾರಕಾ ಜಿಲ್ಲೆಯ ದೇವ್ಭೂಮಿಯಲ್ಲಿರುವ ನ್ಯಾಷನಲ್ ಅಕಾಡೆಮಿ ಆಫ್ ಕೋಸ್ಟಲ್ ಪೊಲೀಸಿಂಗ್ಗೆ (ಎನ್ಎಸಿಪಿ) ಭೇಟಿ ನೀಡಿ ಅವರು ಮಾತನಾಡಿದರು.</p>.<p class="title">ಪ್ರತಿಕೂಲ ಹವಾಮಾನ ಮತ್ತು ಭೌಗೋಳಿಕ ಸವಾಲುಗಳ ನಡುವೆಯೂ ಸಂಸ್ಥೆಯನ್ನು ಸ್ಥಾಪಿಸಿದ ಬಿಎಸ್ಎಫ್ ಗುಜರಾತ್ ಕ್ರಮವನ್ನು ಅಮಿತ್ ಶಾ ಶ್ಲಾಘಿಸಿದರು.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕರಾವಳಿ ಭದ್ರತಾಪಡೆಯನ್ನು ಅಭೇದ್ಯಗೊಳಿಸಲು ಕೆಲಸ ಮಾಡುತ್ತಿದ್ದೇವೆ. ಕಡಲಿನಲ್ಲಿ ಕರಾವಳಿ ಭದ್ರತಾ ಪಡೆಗಳು ಎದುರಿಸುವ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ಹೇಳಿದರು.</p>.<p>ಭವಿಷ್ಯದಲ್ಲಿ ಅಕಾಡೆಮಿಯು ವಿವಿಧ ರಾಜ್ಯಗಳ ಕರಾವಳಿ ಭದ್ರತಾ ಪೊಲೀಸರಿಗೆ ಉನ್ನತ ಮಟ್ಟದ ತರಬೇತಿ ಒದಗಿಸಲಿದೆ ಮತ್ತು ಕಡಲ ಪ್ರದೇಶಗಳ ಭದ್ರತೆಗೆ ಪ್ರಮುಖ ಕೊಡುಗೆ ನೀಡಲಿದೆ ವಿಶ್ವಾಸ ವ್ಯಕ್ತಪಡಿಸಿದರು.</p>.<p>2018ರಲ್ಲಿ ಆರಂಭವಾದ ಅಕಾಡೆಮಿಯು ಓಖಾ ಕರಾವಳಿ ನಗರದ ಸಮೀಪವಿದ್ದು, ಗಡಿ ಭದ್ರತಾ ಪಡೆ ಅದನ್ನು ಮುನ್ನಡೆಸುತ್ತಿದೆ. ಕರಾವಳಿ ಭದ್ರತಾ ಪಡೆಯ ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾಪಡೆಗಳಿಗೆ ತರಬೇತಿ ನೀಡಲು 2018ರಲ್ಲಿ ಆರಂಭವಾದ ದೇಶದ ಮೊದಲ ಶಾಲೆ ಇದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ದ್ವಾರಕಾ (ಗುಜರಾತ್):</strong> ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಕರಾವಳಿ ಭ್ರದ್ರತಾ ಪಡೆಯನ್ನು ಬಲಿಷ್ಠ ಮತ್ತು ಅಭೇದ್ಯಗೊಳಿಸುವತ್ತ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದರು.</p>.<p class="title">ಗುಜರಾತ್ನ ದ್ವಾರಕಾ ಜಿಲ್ಲೆಯ ದೇವ್ಭೂಮಿಯಲ್ಲಿರುವ ನ್ಯಾಷನಲ್ ಅಕಾಡೆಮಿ ಆಫ್ ಕೋಸ್ಟಲ್ ಪೊಲೀಸಿಂಗ್ಗೆ (ಎನ್ಎಸಿಪಿ) ಭೇಟಿ ನೀಡಿ ಅವರು ಮಾತನಾಡಿದರು.</p>.<p class="title">ಪ್ರತಿಕೂಲ ಹವಾಮಾನ ಮತ್ತು ಭೌಗೋಳಿಕ ಸವಾಲುಗಳ ನಡುವೆಯೂ ಸಂಸ್ಥೆಯನ್ನು ಸ್ಥಾಪಿಸಿದ ಬಿಎಸ್ಎಫ್ ಗುಜರಾತ್ ಕ್ರಮವನ್ನು ಅಮಿತ್ ಶಾ ಶ್ಲಾಘಿಸಿದರು.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕರಾವಳಿ ಭದ್ರತಾಪಡೆಯನ್ನು ಅಭೇದ್ಯಗೊಳಿಸಲು ಕೆಲಸ ಮಾಡುತ್ತಿದ್ದೇವೆ. ಕಡಲಿನಲ್ಲಿ ಕರಾವಳಿ ಭದ್ರತಾ ಪಡೆಗಳು ಎದುರಿಸುವ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ಹೇಳಿದರು.</p>.<p>ಭವಿಷ್ಯದಲ್ಲಿ ಅಕಾಡೆಮಿಯು ವಿವಿಧ ರಾಜ್ಯಗಳ ಕರಾವಳಿ ಭದ್ರತಾ ಪೊಲೀಸರಿಗೆ ಉನ್ನತ ಮಟ್ಟದ ತರಬೇತಿ ಒದಗಿಸಲಿದೆ ಮತ್ತು ಕಡಲ ಪ್ರದೇಶಗಳ ಭದ್ರತೆಗೆ ಪ್ರಮುಖ ಕೊಡುಗೆ ನೀಡಲಿದೆ ವಿಶ್ವಾಸ ವ್ಯಕ್ತಪಡಿಸಿದರು.</p>.<p>2018ರಲ್ಲಿ ಆರಂಭವಾದ ಅಕಾಡೆಮಿಯು ಓಖಾ ಕರಾವಳಿ ನಗರದ ಸಮೀಪವಿದ್ದು, ಗಡಿ ಭದ್ರತಾ ಪಡೆ ಅದನ್ನು ಮುನ್ನಡೆಸುತ್ತಿದೆ. ಕರಾವಳಿ ಭದ್ರತಾ ಪಡೆಯ ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾಪಡೆಗಳಿಗೆ ತರಬೇತಿ ನೀಡಲು 2018ರಲ್ಲಿ ಆರಂಭವಾದ ದೇಶದ ಮೊದಲ ಶಾಲೆ ಇದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>