‘ನಮಗೆ ಗೊತ್ತಿಲ್ಲದ, ಸರಿಯಾಗಿ ತಿಳಿಸದ ಹಲವು ಐತಿಹಾಸಿಕ ಘಟನೆಗಳು ನಡೆದು ಹೋಗಿವೆ. ಉದಾಹರಣೆಗೆ, ಸಂಸ್ಕೃತ ವ್ಯಾಕರಣ ಭಾರತದಲ್ಲಿ ಹುಟ್ಟಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಏಕೆ ಎಂದು ನಾವು ಎಂದಾದರೂ ಪ್ರಶ್ನೆ ಕೇಳಿದ್ದೇವೆಯೇ? ಯಾಕೆಂದರೆ, ಮುಖ್ಯವಾಗಿ ನಾವು ನಮ್ಮ ಸ್ವಂತಿಕೆ ಮತ್ತು ಜ್ಞಾನವನ್ನು ಮರೆತಿದ್ದೇವೆ. ಇನ್ನೊಂದು, ಕಾರಣವೇನೆಂದರೆ, ಜಗತ್ತಿನ ವಾಯವ್ಯ ಭಾಗದಿಂದ ಬಂದ ಅತಿಕ್ರಮಣಕಾರರು ಭಾರತವನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದರು’ ಎಂದು ತಿಳಿಸಿದರು.