<p><strong>ಕಾಶಿ: </strong>ಶಂಕರಾಚಾರ್ಯರ ಉಪದೇಶಗಳನ್ನು ದೇಶಾದ್ಯಂತ ತಲುಪಿಸುವ ಉದ್ದೇಶದಿಂದ ವೇದಾಂತಭಾರತಿಯ ಸಂರಕ್ಷಕರಾದ ಶಂಕರಭಾರತೀ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀ ಶಂಕರಾಚಾರ್ಯ ವಾಙ್ಮಯ ಸೇವಾ ಪರಿಷತ್ತಿನ ಆಶ್ರಯದಲ್ಲಿ ವಾರಾಣಸಿಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಸಾಧು-ಸಂತರ ಸಮಾವೇಶ ಭಾನುವಾರ ಸಂಪನ್ನಗೊಂಡಿತು.</p>.<p>ವಾರಾಣಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಆಚಾರ್ಯ ಮಹಾಮಂಡಲೇಶ್ವರರು, ಮಹಾಮಂಡಲೇಶ್ವರರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಾಧುಸಂತರು ಭಾಗವಹಿಸಿದ್ದರು. ಅಲ್ಲಿ, ಮುಖ್ಯವಾದ ನಿರ್ಣಯಗಳನ್ನು ಕೈಗೊಳ್ಳಲಾಯಿತು.<br />ಇದಾದ ನಂತರ ಮಧ್ಯಾಹ್ನ 3ರಿಂದ 5ಗಂಟೆಯವರೆಗೆ ನಡೆದ ಸಭಾಕಾರ್ಯಕ್ರಮದಲ್ಲಿ ಸಾಧುಸಂತರ ಸಮ್ಮುಖದಲ್ಲಿ ಶಂಕರಾಚಾರ್ಯ ವಿರಚಿತ ಸೌಂದರ್ಯಲಹರಿ ಸ್ತೋತ್ರವನ್ನು ಸಾಮೂಹಿಕವಾಗಿ ಪಾರಾಯಣ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಈ ಎರಡು ದಿನಗಳ ಕಾರ್ಯಕ್ರಮಕ್ಕೆ ಶುಭಹಾರೈಸಿ ಕಳುಹಿಸಿದ್ದ ಸಂದೇಶವನ್ನು ಈ ಸಂದರ್ಭದಲ್ಲಿ ವಾಚನ ಮಾಡಲಾಯಿತು.</p>.<p>ಕರ್ನಾಟಕದಿಂದ ಕಾಶಿಗೆ ಆಗಮಿಸಿದ್ದ ಹಲವಾರು ಮಾತೆಯರು ಕಳೆದ 15ದಿನಗಳಿಂದ ಕಾಶಿಯ ಅನೇಕ ವಿದ್ಯಾಲಯಗಳು, ವಿಶ್ವವಿದ್ಯಾಲಯ, ಧರ್ಮಸಂಸ್ಥೆಗಳಿಗೆ ತೆರಳಿ ಸೌಂದರ್ಯಲಹರಿಯನ್ನು ಪಾಠ ಮಾಡಿದ್ದರು. ಆ ಎಲ್ಲ ವಿದ್ಯಾಲಯಗಳ ವಿದ್ಯಾರ್ಥಿಗಳು, ಮಾತೆಯರು, ಶಿಕ್ಷಕರು ಮುಂತಾದವರು ಸುಮಾರು ಹತ್ತುಸಾವಿರಸಂಖ್ಯೆಯಲ್ಲಿ ಭಾಗವಹಿಸಿ ಸಾಮೂಹಿಕವಾಗಿ ಸೌಂದರ್ಯಲಹರಿ ಪಾರಾಯಣ ಮಾಡಿದರು.</p>.<p><strong>ಸಾಧುಸಂತರ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು</strong></p>.<p>ನಮ್ಮ ಆಶ್ರಮ ಧರ್ಮ ಪಾಲಿಸುತ್ತಾ ನಮ್ಮ ಸಂಸ್ಥೆಗಳ ಕರ್ತವ್ಯವನ್ನೂ ಮಾಡುತ್ತಾ ಸಮಾಜದಲ್ಲಿ ದೌರ್ಬಲ್ಯ ತಲೆ ಎತ್ತದಂತೆ ನೋಡಿಕೊಳ್ಳಬೇಕು. ಸದಾ ಸಬಲ ಸಮಾಜವಾಗಿಯೇ ಉಳಿಯುವಂತೆ ಮಾಡಬೇಕು.</p>.<p>ಧಾರ್ಮಿಕ ಆಚರಣೆಯ ಜೊತೆಗೆ ಆಧ್ಯಾತ್ಮಿಕ ವಿಚಾರಗಳನ್ನು ಜನತೆಗೆ ತಲುಪಿಸಬೇಕು.</p>.<p>ಅಯೋಧ್ಯೆಯಲ್ಲಿ ನಿರ್ಮಿಸಲಿರುವ ಶಂಕರರ ಧ್ಯಾನಮಂದಿರ ಹಾಗೂ ಸಂಶೋಧನ ಕೇಂದ್ರವು ಸರ್ವಾತ್ಮಭಾವವನ್ನು ಸಾರುವ ಪ್ರಧಾನ ಕೇಂದ್ರ ಆಗುವಂತೆ ಎಲ್ಲ ಪ್ರಯತ್ನವನ್ನು ಮಾಡುವುದು.</p>.<p>ಸರ್ವಾತ್ಮಭಾವವನ್ನು ಸಾರುವ ಶಂಕರರ ಸ್ತೋತ್ರಾದಿ ಉಪದೇಶಗಳನ್ನು ದೇಶಾದ್ಯಂತ ತಿಳಿಸುವ ಎಲ್ಲ ಕಾರ್ಯಗಳನ್ನು ಯಶಸ್ವಿಗೊಳಿಸುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಶಿ: </strong>ಶಂಕರಾಚಾರ್ಯರ ಉಪದೇಶಗಳನ್ನು ದೇಶಾದ್ಯಂತ ತಲುಪಿಸುವ ಉದ್ದೇಶದಿಂದ ವೇದಾಂತಭಾರತಿಯ ಸಂರಕ್ಷಕರಾದ ಶಂಕರಭಾರತೀ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀ ಶಂಕರಾಚಾರ್ಯ ವಾಙ್ಮಯ ಸೇವಾ ಪರಿಷತ್ತಿನ ಆಶ್ರಯದಲ್ಲಿ ವಾರಾಣಸಿಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಸಾಧು-ಸಂತರ ಸಮಾವೇಶ ಭಾನುವಾರ ಸಂಪನ್ನಗೊಂಡಿತು.</p>.<p>ವಾರಾಣಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಆಚಾರ್ಯ ಮಹಾಮಂಡಲೇಶ್ವರರು, ಮಹಾಮಂಡಲೇಶ್ವರರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಾಧುಸಂತರು ಭಾಗವಹಿಸಿದ್ದರು. ಅಲ್ಲಿ, ಮುಖ್ಯವಾದ ನಿರ್ಣಯಗಳನ್ನು ಕೈಗೊಳ್ಳಲಾಯಿತು.<br />ಇದಾದ ನಂತರ ಮಧ್ಯಾಹ್ನ 3ರಿಂದ 5ಗಂಟೆಯವರೆಗೆ ನಡೆದ ಸಭಾಕಾರ್ಯಕ್ರಮದಲ್ಲಿ ಸಾಧುಸಂತರ ಸಮ್ಮುಖದಲ್ಲಿ ಶಂಕರಾಚಾರ್ಯ ವಿರಚಿತ ಸೌಂದರ್ಯಲಹರಿ ಸ್ತೋತ್ರವನ್ನು ಸಾಮೂಹಿಕವಾಗಿ ಪಾರಾಯಣ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಈ ಎರಡು ದಿನಗಳ ಕಾರ್ಯಕ್ರಮಕ್ಕೆ ಶುಭಹಾರೈಸಿ ಕಳುಹಿಸಿದ್ದ ಸಂದೇಶವನ್ನು ಈ ಸಂದರ್ಭದಲ್ಲಿ ವಾಚನ ಮಾಡಲಾಯಿತು.</p>.<p>ಕರ್ನಾಟಕದಿಂದ ಕಾಶಿಗೆ ಆಗಮಿಸಿದ್ದ ಹಲವಾರು ಮಾತೆಯರು ಕಳೆದ 15ದಿನಗಳಿಂದ ಕಾಶಿಯ ಅನೇಕ ವಿದ್ಯಾಲಯಗಳು, ವಿಶ್ವವಿದ್ಯಾಲಯ, ಧರ್ಮಸಂಸ್ಥೆಗಳಿಗೆ ತೆರಳಿ ಸೌಂದರ್ಯಲಹರಿಯನ್ನು ಪಾಠ ಮಾಡಿದ್ದರು. ಆ ಎಲ್ಲ ವಿದ್ಯಾಲಯಗಳ ವಿದ್ಯಾರ್ಥಿಗಳು, ಮಾತೆಯರು, ಶಿಕ್ಷಕರು ಮುಂತಾದವರು ಸುಮಾರು ಹತ್ತುಸಾವಿರಸಂಖ್ಯೆಯಲ್ಲಿ ಭಾಗವಹಿಸಿ ಸಾಮೂಹಿಕವಾಗಿ ಸೌಂದರ್ಯಲಹರಿ ಪಾರಾಯಣ ಮಾಡಿದರು.</p>.<p><strong>ಸಾಧುಸಂತರ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು</strong></p>.<p>ನಮ್ಮ ಆಶ್ರಮ ಧರ್ಮ ಪಾಲಿಸುತ್ತಾ ನಮ್ಮ ಸಂಸ್ಥೆಗಳ ಕರ್ತವ್ಯವನ್ನೂ ಮಾಡುತ್ತಾ ಸಮಾಜದಲ್ಲಿ ದೌರ್ಬಲ್ಯ ತಲೆ ಎತ್ತದಂತೆ ನೋಡಿಕೊಳ್ಳಬೇಕು. ಸದಾ ಸಬಲ ಸಮಾಜವಾಗಿಯೇ ಉಳಿಯುವಂತೆ ಮಾಡಬೇಕು.</p>.<p>ಧಾರ್ಮಿಕ ಆಚರಣೆಯ ಜೊತೆಗೆ ಆಧ್ಯಾತ್ಮಿಕ ವಿಚಾರಗಳನ್ನು ಜನತೆಗೆ ತಲುಪಿಸಬೇಕು.</p>.<p>ಅಯೋಧ್ಯೆಯಲ್ಲಿ ನಿರ್ಮಿಸಲಿರುವ ಶಂಕರರ ಧ್ಯಾನಮಂದಿರ ಹಾಗೂ ಸಂಶೋಧನ ಕೇಂದ್ರವು ಸರ್ವಾತ್ಮಭಾವವನ್ನು ಸಾರುವ ಪ್ರಧಾನ ಕೇಂದ್ರ ಆಗುವಂತೆ ಎಲ್ಲ ಪ್ರಯತ್ನವನ್ನು ಮಾಡುವುದು.</p>.<p>ಸರ್ವಾತ್ಮಭಾವವನ್ನು ಸಾರುವ ಶಂಕರರ ಸ್ತೋತ್ರಾದಿ ಉಪದೇಶಗಳನ್ನು ದೇಶಾದ್ಯಂತ ತಿಳಿಸುವ ಎಲ್ಲ ಕಾರ್ಯಗಳನ್ನು ಯಶಸ್ವಿಗೊಳಿಸುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>