<p><strong>ಲಖನೌ:</strong> ಸಾಮೂಹಿಕ ವಿವಾಹದಂಥ ಸಮುದಾಯ ಕಾರ್ಯಕ್ರಮಗಳಿಂದ ಬಾಲ್ಯವಿವಾಹ ಹಾಗೂ ವರದಕ್ಷಿಣೆ ಪಿಡುಗು ತಡೆಯಬಹುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಗೋರಖ್ಪುರ, ದಿಯೊರಿಯಾ, ಮಹಾರಾಜ್ಗಂಜ್ ಹಾಗೂ ಕುಶೀನಗರಗಳ 2,503 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p>.<p>‘ಸಾಮೂಹಿಕ ವಿವಾಹದಿಂದ ಬಾಲ್ಯವಿವಾಹ ತಡೆಗಟ್ಟಬಹುದು. ಯಾಕೆಂದರೆ ಸಾರ್ವಜನಿಕವಾಗಿ ಬಾಲ್ಯವಿವಾಹವಾಗುವುದು ಸಾಧ್ಯವಿಲ್ಲ. ಹಾಗೆಯೇ ಸಾರ್ವಜನಿಕವಾಗಿ ಯಾರೂ ವರದಕ್ಷಿಣೆ ತೆಗೆದುಕೊಳ್ಳುವುದೂ ಸಾಧ್ಯವಿಲ್ಲ. ಇಂಥ ಕಾರ್ಯಕ್ರಮಗಳ ಮೂಲಕ ಅನಿಷ್ಟ ಪದ್ಧತಿಗಳನ್ನು ನಿಯಂತ್ರಿಸಬಹುದು’ ಎಂದು ಯೋಗಿ ಹೇಳಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/lok-sabha-attractive-place-to-work-says-tharoor-on-selfie-with-women-mps-apologises-888198.html" itemprop="url">ಮಹಿಳಾ ಸಂಸದರ ಜತೆ ಸೆಲ್ಫಿ ತೆಗೆದು ‘ಸಂಸತ್ತು ಆಕರ್ಷಕ’ವೆಂದ ತರೂರ್: ನಂತರ ಕ್ಷಮೆ </a></p>.<p>2017ರ ಮೊದಲು ಅನೇಕ ಕಲ್ಯಾಣ ಯೋಜನೆಗಳು ಬಡವರನ್ನು, ಕಾರ್ಮಿಕರನ್ನು, ರೈತರನ್ನು ಹಾಗೂ ಯುವಕರನ್ನು ತಲುಪುತ್ತಿರಲಿಲ್ಲ. ಈಗ ಸರ್ಕಾರದ ಯೋಜನೆಗಳು ಬಡವರನ್ನು ತಲುಪುತ್ತಿವೆ’ ಎಂದು ಅವರು ಹೇಳಿದ್ದಾರೆ.</p>.<p>ಸಾಮೂಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ಉಲ್ಲೇಖಿಸಿದ ಅವರು, ಇದರಲ್ಲಿ ಜಾತಿ, ಮತ, ಧರ್ಮ, ಪ್ರದೇಶ ಅಥವಾ ಭಾಷೆಯ ತಾರತಮ್ಯವಿಲ್ಲ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಸಾಮೂಹಿಕ ವಿವಾಹದಂಥ ಸಮುದಾಯ ಕಾರ್ಯಕ್ರಮಗಳಿಂದ ಬಾಲ್ಯವಿವಾಹ ಹಾಗೂ ವರದಕ್ಷಿಣೆ ಪಿಡುಗು ತಡೆಯಬಹುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಗೋರಖ್ಪುರ, ದಿಯೊರಿಯಾ, ಮಹಾರಾಜ್ಗಂಜ್ ಹಾಗೂ ಕುಶೀನಗರಗಳ 2,503 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p>.<p>‘ಸಾಮೂಹಿಕ ವಿವಾಹದಿಂದ ಬಾಲ್ಯವಿವಾಹ ತಡೆಗಟ್ಟಬಹುದು. ಯಾಕೆಂದರೆ ಸಾರ್ವಜನಿಕವಾಗಿ ಬಾಲ್ಯವಿವಾಹವಾಗುವುದು ಸಾಧ್ಯವಿಲ್ಲ. ಹಾಗೆಯೇ ಸಾರ್ವಜನಿಕವಾಗಿ ಯಾರೂ ವರದಕ್ಷಿಣೆ ತೆಗೆದುಕೊಳ್ಳುವುದೂ ಸಾಧ್ಯವಿಲ್ಲ. ಇಂಥ ಕಾರ್ಯಕ್ರಮಗಳ ಮೂಲಕ ಅನಿಷ್ಟ ಪದ್ಧತಿಗಳನ್ನು ನಿಯಂತ್ರಿಸಬಹುದು’ ಎಂದು ಯೋಗಿ ಹೇಳಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/lok-sabha-attractive-place-to-work-says-tharoor-on-selfie-with-women-mps-apologises-888198.html" itemprop="url">ಮಹಿಳಾ ಸಂಸದರ ಜತೆ ಸೆಲ್ಫಿ ತೆಗೆದು ‘ಸಂಸತ್ತು ಆಕರ್ಷಕ’ವೆಂದ ತರೂರ್: ನಂತರ ಕ್ಷಮೆ </a></p>.<p>2017ರ ಮೊದಲು ಅನೇಕ ಕಲ್ಯಾಣ ಯೋಜನೆಗಳು ಬಡವರನ್ನು, ಕಾರ್ಮಿಕರನ್ನು, ರೈತರನ್ನು ಹಾಗೂ ಯುವಕರನ್ನು ತಲುಪುತ್ತಿರಲಿಲ್ಲ. ಈಗ ಸರ್ಕಾರದ ಯೋಜನೆಗಳು ಬಡವರನ್ನು ತಲುಪುತ್ತಿವೆ’ ಎಂದು ಅವರು ಹೇಳಿದ್ದಾರೆ.</p>.<p>ಸಾಮೂಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ಉಲ್ಲೇಖಿಸಿದ ಅವರು, ಇದರಲ್ಲಿ ಜಾತಿ, ಮತ, ಧರ್ಮ, ಪ್ರದೇಶ ಅಥವಾ ಭಾಷೆಯ ತಾರತಮ್ಯವಿಲ್ಲ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>