ಅರ್ಜಿಗಳ ಸಂಬಂಧಿಸಿ ದೀರ್ಘ ಅವಧಿಯ ವಿಚಾರಣೆ ನಡೆಸಿದ ಪೀಠ, ‘ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರದ ಕಾಯ್ದೆಗೆ ತಿದ್ದುಪಡಿ ತಂದಿದೆ. ಹಲವಾರು ಮುನ್ನೆಚ್ಚರಿಕಾ ಕ್ರಮಗಳು ಮತ್ತು ನಿಯಮಗಳನ್ನು ವಿಧಿಸುವ ಮೂಲಕ ಈ ಕ್ರೀಡೆ ಆಯೋಜಿಸಲು ಅನುವು ಮಾಡಿದೆ. ಸಮಸ್ಯೆ ಏನೆಂದರೆ, ನಿಯಮಗಳು ಏನಾದರೂ ಆಗಿರಬಹುದು ಆದರೆ ಅವು ವಾಸ್ತವದ ಜೊತೆ ಹೊಂದಿಕೆ ಆಗುವುದಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.