<p><strong>ತಿರುವನಂತಪುರ: </strong>ಬೆಂಗಳೂರಿನ ಡ್ರಗ್ ಮಾಫಿಯಾದಲ್ಲಿ ಕೇರಳ ಸಿಪಿಐ(ಎಂ) ನಾಯಕನ ಪುತ್ರನ ಪಾತ್ರವಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ (ಐಯುಎಂಎಲ್) ಯುವ ಘಟಕ ಆರೋಪಿಸಿದೆ.</p>.<p>ಸಿಪಿಐ(ಎಂ) ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ, ಬೆಂಗಳೂರಿನ ಡ್ರಗ್ ಮಾಫಿಯಾದ ಕೆಲ ಸದಸ್ಯರ ಜತೆ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಐಯುಎಂಎಲ್ ಆರೋಪಿಸಿದೆ.</p>.<p>ಕಮ್ಮನಹಳ್ಳಿಯ ಮೊಹಮ್ಮದ್ ಅನೂಪ್ ಡ್ರಗ್ ದಂಧೆಯ ಪ್ರಮುಖ ಆರೋಪಿಯಾಗಿದ್ದಾರೆ. ಇವರ ಹೋಟೆಲ್ ಉದ್ಯಮಕ್ಕೆ ಬಿನೀಶ್ ಹಣ ಹೂಡಿಕೆ ಮಾಡಿದ್ದರು ಎಂದು ಐಯುಎಂಎಲ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಫಿರೋಸ್ ಆರೋಪಿಸಿದ್ದಾರೆ.</p>.<p>ಐಯುಎಂಎಲ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಬಿನೀಶ್, ಮೊಹಮ್ಮದ್ ಅನೂಪ್ ಹೊಟೇಲ್ ಉದ್ಯಮಕ್ಕೆ ಸಾಲ ನೀಡಿದ್ದೆ. ಆದರೆ ಆಗ ನನಗೆ ಅನೂಪ್ಗೆ ಡ್ರಗ್ಸ್ ಮಾಫಿಯಾದ ಹಿನ್ನೆಲೆ ಇದೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.</p>.<p>ಈ ಪ್ರಕರಣ ಕುರಿತಂತೆ ತನಿಖೆ ನಡೆಸಬೇಕು ಎಂದು ಬಿಜೆಪಿ ಸಹ ಒತ್ತಾಯಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ: </strong>ಬೆಂಗಳೂರಿನ ಡ್ರಗ್ ಮಾಫಿಯಾದಲ್ಲಿ ಕೇರಳ ಸಿಪಿಐ(ಎಂ) ನಾಯಕನ ಪುತ್ರನ ಪಾತ್ರವಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ (ಐಯುಎಂಎಲ್) ಯುವ ಘಟಕ ಆರೋಪಿಸಿದೆ.</p>.<p>ಸಿಪಿಐ(ಎಂ) ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ, ಬೆಂಗಳೂರಿನ ಡ್ರಗ್ ಮಾಫಿಯಾದ ಕೆಲ ಸದಸ್ಯರ ಜತೆ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಐಯುಎಂಎಲ್ ಆರೋಪಿಸಿದೆ.</p>.<p>ಕಮ್ಮನಹಳ್ಳಿಯ ಮೊಹಮ್ಮದ್ ಅನೂಪ್ ಡ್ರಗ್ ದಂಧೆಯ ಪ್ರಮುಖ ಆರೋಪಿಯಾಗಿದ್ದಾರೆ. ಇವರ ಹೋಟೆಲ್ ಉದ್ಯಮಕ್ಕೆ ಬಿನೀಶ್ ಹಣ ಹೂಡಿಕೆ ಮಾಡಿದ್ದರು ಎಂದು ಐಯುಎಂಎಲ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಫಿರೋಸ್ ಆರೋಪಿಸಿದ್ದಾರೆ.</p>.<p>ಐಯುಎಂಎಲ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಬಿನೀಶ್, ಮೊಹಮ್ಮದ್ ಅನೂಪ್ ಹೊಟೇಲ್ ಉದ್ಯಮಕ್ಕೆ ಸಾಲ ನೀಡಿದ್ದೆ. ಆದರೆ ಆಗ ನನಗೆ ಅನೂಪ್ಗೆ ಡ್ರಗ್ಸ್ ಮಾಫಿಯಾದ ಹಿನ್ನೆಲೆ ಇದೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.</p>.<p>ಈ ಪ್ರಕರಣ ಕುರಿತಂತೆ ತನಿಖೆ ನಡೆಸಬೇಕು ಎಂದು ಬಿಜೆಪಿ ಸಹ ಒತ್ತಾಯಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>