ತಿರುವನಂತಪುರ: ಬೆಂಗಳೂರಿನ ಡ್ರಗ್ ಮಾಫಿಯಾದಲ್ಲಿ ಕೇರಳ ಸಿಪಿಐ(ಎಂ) ನಾಯಕನ ಪುತ್ರನ ಪಾತ್ರವಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ (ಐಯುಎಂಎಲ್) ಯುವ ಘಟಕ ಆರೋಪಿಸಿದೆ.
ಸಿಪಿಐ(ಎಂ) ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ, ಬೆಂಗಳೂರಿನ ಡ್ರಗ್ ಮಾಫಿಯಾದ ಕೆಲ ಸದಸ್ಯರ ಜತೆ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಐಯುಎಂಎಲ್ ಆರೋಪಿಸಿದೆ.
ಕಮ್ಮನಹಳ್ಳಿಯ ಮೊಹಮ್ಮದ್ ಅನೂಪ್ ಡ್ರಗ್ ದಂಧೆಯ ಪ್ರಮುಖ ಆರೋಪಿಯಾಗಿದ್ದಾರೆ. ಇವರ ಹೋಟೆಲ್ ಉದ್ಯಮಕ್ಕೆ ಬಿನೀಶ್ ಹಣ ಹೂಡಿಕೆ ಮಾಡಿದ್ದರು ಎಂದು ಐಯುಎಂಎಲ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಫಿರೋಸ್ ಆರೋಪಿಸಿದ್ದಾರೆ.
ಐಯುಎಂಎಲ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಬಿನೀಶ್, ಮೊಹಮ್ಮದ್ ಅನೂಪ್ ಹೊಟೇಲ್ ಉದ್ಯಮಕ್ಕೆ ಸಾಲ ನೀಡಿದ್ದೆ. ಆದರೆ ಆಗ ನನಗೆ ಅನೂಪ್ಗೆ ಡ್ರಗ್ಸ್ ಮಾಫಿಯಾದ ಹಿನ್ನೆಲೆ ಇದೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಈ ಪ್ರಕರಣ ಕುರಿತಂತೆ ತನಿಖೆ ನಡೆಸಬೇಕು ಎಂದು ಬಿಜೆಪಿ ಸಹ ಒತ್ತಾಯಿಸಿದೆ.