<p><strong>ಬಲಿಯಾ (ಉತ್ತರ ಪ್ರದೇಶ): </strong>ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಲ್ಲಿ ಬಿಜೆಪಿ ಪರವಾಗಿ ನಡೆಸುತ್ತಿದ್ದ ಪ್ರಚಾರ ಸಭೆಯ ವೇಳೆ, ಕೆಲವು ಯುವಕರು ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪರವಾಗಿ ಘೋಷಣೆ ಕೂಗಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p>ಇಲ್ಲಿನ ಬನ್ಷಿ ಬಜಾರ್ನಲ್ಲಿ ರಾಜನಾಥ್ ಅವರು ಭಾಷಣ ಮಾಡುತ್ತಿದ್ದರು. ಆಗ ಕೆಲವು ಯುವಕರು, ಅವರ ಭಾಷಣಕ್ಕೆ ಅಡ್ಡಿಪಡಿಸಿದರು. ‘ಮೂರು ವರ್ಷಗಳಿಂದ ಸೇನೆಯ ನೇಮಕಾತಿ ನಡೆದಿಲ್ಲ. ಸರ್ಕಾರ ನೇಮಕಾತಿ ನಡೆಸುತ್ತಿಲ್ಲ’ ಎಂದು ಘೋಷಣೆ ಕೂಗಿದರು.</p>.<p>ಆಗ ಅವರನ್ನು ರಾಜನಾಥ್ ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಯುವಕರು ಘೋಷಣೆ ಕೂಗುವುದನ್ನು ಮುಂದುವರಿಸಿದರು. ಅದರ ಮಧ್ಯೆಯೇ ರಾಜನಾಥ್ ಸಹ ಭಾಷಣ ಮುಂದುವರಿಸಿದರು.</p>.<p>ರಾಜನಾಥ್ ಅವರ ಭಾಷಣ ಇನ್ನೇನುಮುಗಿಯುತ್ತಿದೆ ಎನ್ನುವಾಗ ಒಬ್ಬ ಯುವಕ ಎಂದು ನಿಂತು, ‘ಬಡವರ ಆಪತ್ಬಾಂಧವ ಅಖಿಲೇಶ್ ಯಾದವ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ.ಆ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p><span class="Bullet quote">* ಸೇನೆಯ ನೇಮಕಾತಿಯಂತಹ ವಿಚಾರಗಳಲ್ಲಿ ರಾಜಕೀಯವನ್ನು ತರಬಾರದು. ಇದರಲ್ಲಿ ರಾಜಕೀಯವನ್ನು ತಂದರೆ ಪರಿಸ್ಥಿತಿ ಬಿಗಡಾಯಿಸುತ್ತದೆ.</span></p>.<p><em><strong><span class="Bullet quote">-ರಾಜನಾಥ್ ಸಿಂಗ್, ರಕ್ಷಣಾ ಸಚಿವ</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಲಿಯಾ (ಉತ್ತರ ಪ್ರದೇಶ): </strong>ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಲ್ಲಿ ಬಿಜೆಪಿ ಪರವಾಗಿ ನಡೆಸುತ್ತಿದ್ದ ಪ್ರಚಾರ ಸಭೆಯ ವೇಳೆ, ಕೆಲವು ಯುವಕರು ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪರವಾಗಿ ಘೋಷಣೆ ಕೂಗಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p>ಇಲ್ಲಿನ ಬನ್ಷಿ ಬಜಾರ್ನಲ್ಲಿ ರಾಜನಾಥ್ ಅವರು ಭಾಷಣ ಮಾಡುತ್ತಿದ್ದರು. ಆಗ ಕೆಲವು ಯುವಕರು, ಅವರ ಭಾಷಣಕ್ಕೆ ಅಡ್ಡಿಪಡಿಸಿದರು. ‘ಮೂರು ವರ್ಷಗಳಿಂದ ಸೇನೆಯ ನೇಮಕಾತಿ ನಡೆದಿಲ್ಲ. ಸರ್ಕಾರ ನೇಮಕಾತಿ ನಡೆಸುತ್ತಿಲ್ಲ’ ಎಂದು ಘೋಷಣೆ ಕೂಗಿದರು.</p>.<p>ಆಗ ಅವರನ್ನು ರಾಜನಾಥ್ ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಯುವಕರು ಘೋಷಣೆ ಕೂಗುವುದನ್ನು ಮುಂದುವರಿಸಿದರು. ಅದರ ಮಧ್ಯೆಯೇ ರಾಜನಾಥ್ ಸಹ ಭಾಷಣ ಮುಂದುವರಿಸಿದರು.</p>.<p>ರಾಜನಾಥ್ ಅವರ ಭಾಷಣ ಇನ್ನೇನುಮುಗಿಯುತ್ತಿದೆ ಎನ್ನುವಾಗ ಒಬ್ಬ ಯುವಕ ಎಂದು ನಿಂತು, ‘ಬಡವರ ಆಪತ್ಬಾಂಧವ ಅಖಿಲೇಶ್ ಯಾದವ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ.ಆ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p><span class="Bullet quote">* ಸೇನೆಯ ನೇಮಕಾತಿಯಂತಹ ವಿಚಾರಗಳಲ್ಲಿ ರಾಜಕೀಯವನ್ನು ತರಬಾರದು. ಇದರಲ್ಲಿ ರಾಜಕೀಯವನ್ನು ತಂದರೆ ಪರಿಸ್ಥಿತಿ ಬಿಗಡಾಯಿಸುತ್ತದೆ.</span></p>.<p><em><strong><span class="Bullet quote">-ರಾಜನಾಥ್ ಸಿಂಗ್, ರಕ್ಷಣಾ ಸಚಿವ</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>