<p><strong>ಬೆಂಗಳೂರು:</strong> 2020 ಮತ್ತು 2021ರಲ್ಲಿ ರಾಜ್ಯದ ಪೊಲೀಸರು ವಿವಿಧೆಡೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿರುವ ₹ 50.23ಕೋಟಿ ಮೌಲ್ಯದ ವಿವಿಧ ಮಾದಕವಸ್ತುಗಳನ್ನು ‘ಅಂತರರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನ’ವಾದ ಶನಿವಾರ ನಾಶಪಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.</p>.<p>ಮಾಧ್ಯಮ ಪ್ರತಿನಿಧಿಗಳ ಜತೆ ಶುಕ್ರವಾರ ಮಾತನಾಡಿದ ಅವರು, ‘23,829 ಕೆ.ಜಿ. ಗಾಂಜಾ, 34.4 ಕೆ.ಜಿ. ಪೊಪ್ಪಿ, 1 ಕೆ.ಜಿ. ಬ್ರೌನ್ ಷುಗರ್, 161.34 ಕೆ.ಜಿ. ಓಪಿಯಂ, 6.15 ಕೆ.ಜಿ. ಹಶೀಶ್, 5.2 ಕೆ.ಜಿ. ಚರಸ್, ಎಂಡಿಎಂಎ ಪುಡಿ, ಮಾತ್ರೆಗಳು, ಕೊಕೇನ್, ಎಲ್ಎಸ್ಡಿ ಹಾಳೆಗಳನ್ನು ಶನಿವಾರ ಏಕಕಾಲಕ್ಕೆ ನಾಶಪಡಿಸಲಾಗುವುದು’ ಎಂದರು.</p>.<p class="Subhead">‘ನಾನು ಪರೀಕ್ಷೆ ಬರೆದಿಲ್ಲ’: ‘ಮುಖ್ಯಮಂತ್ರಿ ಬದಲಾವಣೆ ಪರೀಕ್ಷೆ ಬರೆದಿದ್ದೇವೆ’ ಎಂಬ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ನಾನು ಪರೀಕ್ಷೆ ಬರೆದಿಲ್ಲ. ಯಾವ ಫಲಿತಾಂಶವನ್ನೂ ನಿರೀಕ್ಷಿಸಿಲ್ಲ. ಯಾವುದರ ಆಕಾಂಕ್ಷಿಯೂ ಅಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> 2020 ಮತ್ತು 2021ರಲ್ಲಿ ರಾಜ್ಯದ ಪೊಲೀಸರು ವಿವಿಧೆಡೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿರುವ ₹ 50.23ಕೋಟಿ ಮೌಲ್ಯದ ವಿವಿಧ ಮಾದಕವಸ್ತುಗಳನ್ನು ‘ಅಂತರರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನ’ವಾದ ಶನಿವಾರ ನಾಶಪಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.</p>.<p>ಮಾಧ್ಯಮ ಪ್ರತಿನಿಧಿಗಳ ಜತೆ ಶುಕ್ರವಾರ ಮಾತನಾಡಿದ ಅವರು, ‘23,829 ಕೆ.ಜಿ. ಗಾಂಜಾ, 34.4 ಕೆ.ಜಿ. ಪೊಪ್ಪಿ, 1 ಕೆ.ಜಿ. ಬ್ರೌನ್ ಷುಗರ್, 161.34 ಕೆ.ಜಿ. ಓಪಿಯಂ, 6.15 ಕೆ.ಜಿ. ಹಶೀಶ್, 5.2 ಕೆ.ಜಿ. ಚರಸ್, ಎಂಡಿಎಂಎ ಪುಡಿ, ಮಾತ್ರೆಗಳು, ಕೊಕೇನ್, ಎಲ್ಎಸ್ಡಿ ಹಾಳೆಗಳನ್ನು ಶನಿವಾರ ಏಕಕಾಲಕ್ಕೆ ನಾಶಪಡಿಸಲಾಗುವುದು’ ಎಂದರು.</p>.<p class="Subhead">‘ನಾನು ಪರೀಕ್ಷೆ ಬರೆದಿಲ್ಲ’: ‘ಮುಖ್ಯಮಂತ್ರಿ ಬದಲಾವಣೆ ಪರೀಕ್ಷೆ ಬರೆದಿದ್ದೇವೆ’ ಎಂಬ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ನಾನು ಪರೀಕ್ಷೆ ಬರೆದಿಲ್ಲ. ಯಾವ ಫಲಿತಾಂಶವನ್ನೂ ನಿರೀಕ್ಷಿಸಿಲ್ಲ. ಯಾವುದರ ಆಕಾಂಕ್ಷಿಯೂ ಅಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>