<p><strong>ಕಲಬುರ್ಗಿ:</strong> ಅಗತ್ಯ ಸೇವೆಗಳಲ್ಲಿ ಪ್ರಮುಖವಾಗಿರುವ ಆರೋಗ್ಯ ಸೇವೆಗಳ ಪೈಕಿ ಖಾಸಗಿ ವೈದ್ಯರ ಸಲಹಾ ಶುಲ್ಕವು ಲಾಕ್ಡೌನ್ ನಂತರ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ.</p>.<p>‘ಕೋವಿಡ್ನಂತಹ ಸಂಕಷ್ಟದ ಸಮಯದಲ್ಲಿ ಯಾವುದೇ ತೊಂದರೆ ಆಗದಂತೆ ಸೇವೆ ನೀಡಿದ್ದೇವೆ. ದುಬಾರಿ ಉಪಕರಣಗಳನ್ನು ಖರೀದಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಹೀಗಾಗಿ ಶುಲ್ಕ ಹೆಚ್ಚಿಸುವುದು ಅನಿವಾರ್ಯ ಎನ್ನುತ್ತಾರೆ’ ಖಾಸಗಿ ವೈದ್ಯರು.</p>.<p>‘ಸಾಮಾನ್ಯ ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಹೋದರೆ ವೈದ್ಯರಿಗೆ ₹ 250–₹ 300 ಸಲಹಾ ಶುಲ್ಕ ನೀಡಬೇಕು. ಲಾಕ್ಡೌನ್ ತೆರವುಗೊಳಿಸಿದರೂ ನಮ್ಮ ವ್ಯಾಪಾರ ನಡೆಯುತ್ತಿಲ್ಲ. ನಾವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದೇವೆ’ ಎಂದು ಬೀದಿಬದಿ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.</p>.<p>ಆಟೊ ಪ್ರಯಾಣ ದರವೂ ಹೆಚ್ಚಾಗಿದೆ. ಹೆಚ್ಚು ಪ್ರಯಾಣಿಕರನ್ನು ಒಮ್ಮೆಗೇ ಕರೆದೊಯ್ಯುವಂತಿಲ್ಲ. ಕೋವಿಡ್ ಮಾರ್ಗಸೂಚಿ ಪಾಲಿಸಬೇಕಿದೆ, ಪಾಲಿಸುವುದು ಅನಿವಾರ್ಯವೂ ಆಗಿದೆ ಎಂದು ಆಟೊ ಚಾಲಕರು ಹೇಳುತ್ತಾರೆ.</p>.<p>‘ದಿನ ಪೂರ್ತಿ ಆಟೊ ಓಡಿಸಿದರೂ ಬಾಡಿಗೆ ಕಟ್ಟಲು ಆಗುವುದಿಲ್ಲ. ಕೊರೊನಾ ಭಯದಿಂದಾಗಿ ಪ್ರಯಾಣಿಕರು ಮೊದಲಿನಂತೆ ಬರುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ದರ ಹೆಚ್ಚಿಸಿದ್ದೇವೆ’ ಎನ್ನುತ್ತಾರೆ ಆಟೊ ಚಾಲಕರು.</p>.<p>ಟ್ಯಾಕ್ಸಿ ಪ್ರಯಾಣ ದರವನ್ನು ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ ಎಂಬ ಚಿಂತೆ ಟ್ಯಾಕ್ಸಿ ಮಾಲೀಕರದ್ದು. ಈ ಬಗ್ಗೆ ಪ್ರತಿಕ್ರಿಯಿಸಿದ ಟ್ಯಾಕ್ಸಿ ಮಾಲೀಕ ರುಕ್ಮಣ್ಣ ರೆಡ್ಡಿ, ‘ಲಾಕ್ಡೌನ್ಗೂ ಮುನ್ನ ಪ್ರತಿ ಕಿ.ಮೀಗೆ ₹ 14 ಪಡೆಯುತ್ತಿದ್ದೆವು. ನಷ್ಟವಾಗುತ್ತದೆ ಎಂದು ದರ ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ. ಡೀಸೆಲ್ ಬೆಲೆ ಹೆಚ್ಚಿರುವ ಇಂದಿನ ಸಂದರ್ಭದಲ್ಲಿ ಸರಿಯಾಗಿ ಬಾಡಿಗೆ ಸಿಗದಿದ್ದರೆ ಬ್ಯಾಂಕ್ ಕಂತು ಕಟ್ಟಲು ಸಹ ಸಾಧ್ಯವಾಗುವುದಿಲ್ಲ’ ಎಂದರು.</p>.<p>ಮೊದಲು ಒಬ್ಬರಿಗೆ ಕ್ಷೌರ ಮಾಡಲು ₹ 120 ಪಡೆಯುತ್ತಿದ್ದೆವು. ಈಗ ₹ 30ರಷ್ಟು ಹೆಚ್ಚಿಸಿದ್ದೇವೆ. ಕೊರೊನಾ ಸೋಂಕಿನ ಭೀತಿ ಇರುವುದರಿಂದ ಒಬ್ಬರಿಗೆ ಬಳಸಿದ ಹ್ಯಾಂಡ್ ಗ್ಲೌಸ್ಅನ್ನು ಮತ್ತೊಬ್ಬರಿಗೆ ಬಳಸುವುದಿಲ್ಲ. ಎಲ್ಲ ಸಲಕರಣೆಗಳನ್ನು ಸ್ಯಾನಿಟೈಸ್ ಮಾಡುತ್ತೇವೆ. ಗ್ರಾಹಕರ ಸುರಕ್ಷತೆಗಾಗಿ ದರ ಹೆಚ್ಚಿಸಿದ್ದೇವೆ ಎನ್ನುತ್ತಾರೆ ಕ್ಷೌರದಂಗಡಿಯ ಮಾಲೀಕ ಸಂಜೀವ್.</p>.<p>ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ಕೆಲವು ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ನೀಡುವುದು ಕಡ್ಡಾಯ. ಆದರೆ, ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಹಿಂದೆ ₹ 50 ಇದ್ದ ಶುಲ್ಕವನ್ನು ಈಗ ₹ 100ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ತೊಂದರೆಯಾಗುತ್ತಿದೆ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು.</p>.<p><strong>ನಿರ್ವಹಣೆ: ವಿಜಯ್ ಜೋಷಿ, ಮಾಹಿತಿ: ಸತೀಶ್ ಬಿ. (ಕಲಬುರ್ಗಿ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ಅಗತ್ಯ ಸೇವೆಗಳಲ್ಲಿ ಪ್ರಮುಖವಾಗಿರುವ ಆರೋಗ್ಯ ಸೇವೆಗಳ ಪೈಕಿ ಖಾಸಗಿ ವೈದ್ಯರ ಸಲಹಾ ಶುಲ್ಕವು ಲಾಕ್ಡೌನ್ ನಂತರ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ.</p>.<p>‘ಕೋವಿಡ್ನಂತಹ ಸಂಕಷ್ಟದ ಸಮಯದಲ್ಲಿ ಯಾವುದೇ ತೊಂದರೆ ಆಗದಂತೆ ಸೇವೆ ನೀಡಿದ್ದೇವೆ. ದುಬಾರಿ ಉಪಕರಣಗಳನ್ನು ಖರೀದಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಹೀಗಾಗಿ ಶುಲ್ಕ ಹೆಚ್ಚಿಸುವುದು ಅನಿವಾರ್ಯ ಎನ್ನುತ್ತಾರೆ’ ಖಾಸಗಿ ವೈದ್ಯರು.</p>.<p>‘ಸಾಮಾನ್ಯ ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಹೋದರೆ ವೈದ್ಯರಿಗೆ ₹ 250–₹ 300 ಸಲಹಾ ಶುಲ್ಕ ನೀಡಬೇಕು. ಲಾಕ್ಡೌನ್ ತೆರವುಗೊಳಿಸಿದರೂ ನಮ್ಮ ವ್ಯಾಪಾರ ನಡೆಯುತ್ತಿಲ್ಲ. ನಾವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದೇವೆ’ ಎಂದು ಬೀದಿಬದಿ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.</p>.<p>ಆಟೊ ಪ್ರಯಾಣ ದರವೂ ಹೆಚ್ಚಾಗಿದೆ. ಹೆಚ್ಚು ಪ್ರಯಾಣಿಕರನ್ನು ಒಮ್ಮೆಗೇ ಕರೆದೊಯ್ಯುವಂತಿಲ್ಲ. ಕೋವಿಡ್ ಮಾರ್ಗಸೂಚಿ ಪಾಲಿಸಬೇಕಿದೆ, ಪಾಲಿಸುವುದು ಅನಿವಾರ್ಯವೂ ಆಗಿದೆ ಎಂದು ಆಟೊ ಚಾಲಕರು ಹೇಳುತ್ತಾರೆ.</p>.<p>‘ದಿನ ಪೂರ್ತಿ ಆಟೊ ಓಡಿಸಿದರೂ ಬಾಡಿಗೆ ಕಟ್ಟಲು ಆಗುವುದಿಲ್ಲ. ಕೊರೊನಾ ಭಯದಿಂದಾಗಿ ಪ್ರಯಾಣಿಕರು ಮೊದಲಿನಂತೆ ಬರುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ದರ ಹೆಚ್ಚಿಸಿದ್ದೇವೆ’ ಎನ್ನುತ್ತಾರೆ ಆಟೊ ಚಾಲಕರು.</p>.<p>ಟ್ಯಾಕ್ಸಿ ಪ್ರಯಾಣ ದರವನ್ನು ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ ಎಂಬ ಚಿಂತೆ ಟ್ಯಾಕ್ಸಿ ಮಾಲೀಕರದ್ದು. ಈ ಬಗ್ಗೆ ಪ್ರತಿಕ್ರಿಯಿಸಿದ ಟ್ಯಾಕ್ಸಿ ಮಾಲೀಕ ರುಕ್ಮಣ್ಣ ರೆಡ್ಡಿ, ‘ಲಾಕ್ಡೌನ್ಗೂ ಮುನ್ನ ಪ್ರತಿ ಕಿ.ಮೀಗೆ ₹ 14 ಪಡೆಯುತ್ತಿದ್ದೆವು. ನಷ್ಟವಾಗುತ್ತದೆ ಎಂದು ದರ ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ. ಡೀಸೆಲ್ ಬೆಲೆ ಹೆಚ್ಚಿರುವ ಇಂದಿನ ಸಂದರ್ಭದಲ್ಲಿ ಸರಿಯಾಗಿ ಬಾಡಿಗೆ ಸಿಗದಿದ್ದರೆ ಬ್ಯಾಂಕ್ ಕಂತು ಕಟ್ಟಲು ಸಹ ಸಾಧ್ಯವಾಗುವುದಿಲ್ಲ’ ಎಂದರು.</p>.<p>ಮೊದಲು ಒಬ್ಬರಿಗೆ ಕ್ಷೌರ ಮಾಡಲು ₹ 120 ಪಡೆಯುತ್ತಿದ್ದೆವು. ಈಗ ₹ 30ರಷ್ಟು ಹೆಚ್ಚಿಸಿದ್ದೇವೆ. ಕೊರೊನಾ ಸೋಂಕಿನ ಭೀತಿ ಇರುವುದರಿಂದ ಒಬ್ಬರಿಗೆ ಬಳಸಿದ ಹ್ಯಾಂಡ್ ಗ್ಲೌಸ್ಅನ್ನು ಮತ್ತೊಬ್ಬರಿಗೆ ಬಳಸುವುದಿಲ್ಲ. ಎಲ್ಲ ಸಲಕರಣೆಗಳನ್ನು ಸ್ಯಾನಿಟೈಸ್ ಮಾಡುತ್ತೇವೆ. ಗ್ರಾಹಕರ ಸುರಕ್ಷತೆಗಾಗಿ ದರ ಹೆಚ್ಚಿಸಿದ್ದೇವೆ ಎನ್ನುತ್ತಾರೆ ಕ್ಷೌರದಂಗಡಿಯ ಮಾಲೀಕ ಸಂಜೀವ್.</p>.<p>ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ಕೆಲವು ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ನೀಡುವುದು ಕಡ್ಡಾಯ. ಆದರೆ, ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಹಿಂದೆ ₹ 50 ಇದ್ದ ಶುಲ್ಕವನ್ನು ಈಗ ₹ 100ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ತೊಂದರೆಯಾಗುತ್ತಿದೆ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು.</p>.<p><strong>ನಿರ್ವಹಣೆ: ವಿಜಯ್ ಜೋಷಿ, ಮಾಹಿತಿ: ಸತೀಶ್ ಬಿ. (ಕಲಬುರ್ಗಿ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>