<p><strong>ಬೆಂಗಳೂರು: </strong>‘ಮನುಷ್ಯರಲ್ಲಿ ಅಹಂ ಭಾವ ಹೆಚ್ಚುತ್ತಿದೆ. ಅದರಿಂದ ಕೌಟುಂಬಿಕ ಕಲಹಗಳು ಹಾಗೂ ದೌರ್ಜನ್ಯಗಳೂ ಏರುತ್ತಿವೆ’ ಎಂದು ವಕೀಲರ ಸಾಹಿತ್ಯ ಕೂಟದ ಉಪಾಧ್ಯಕ್ಷೆ ಬಿ.ಜೆ.ಜಿ.ಸತ್ಯಶ್ರೀ ಹೇಳಿದರು.</p>.<p>ಹೊಂಬೇಗೌಡ ನಗರದ ಕನ್ನಡ ಯುವಜನ ಸಂಘ ಹಮ್ಮಿಕೊಂಡಿದ್ದ ‘ಮಹಿಳೆ ಮತ್ತು ಕಾನೂನು’ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಮಹಾತ್ಮ ಗಾಂಧೀಜಿಯವರ ಕನಸಿನ ಕೂಸು ‘ಗ್ರಾಮ ಸ್ವರಾಜ್’ ನನಸಾಗಿದ್ದರೆ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೈಹಿಕ ಹಾಗೂ ಮಾನಸಿಕ ದೌರ್ಜನ್ಯಗಳನ್ನು ತಡೆಯಬಹುದಿತ್ತು. ನಗರೀಕರಣ, ಜಾಗತೀಕರಣ ಮತ್ತು ಖಾಸಗೀಕರಣದ ಪ್ರಭಾವದಿಂದ ಮನುಷ್ಯ ಕೊಳ್ಳುಬಾಕುತನಕ್ಕೆ ಇಳಿದಿದ್ದಾನೆ. ಮಿತಿಮೀರಿದ ಸಂಪಾದನೆಗೆ ಕೈಒಡ್ಡುತ್ತಿದ್ದಾನೆ. ಜೊತೆಗೆ ದೌರ್ಜನ್ಯಗಳನ್ನೂ ಎಸಗುತ್ತಿದ್ದಾನೆ’ ಎಂದರು.</p>.<p>ಕನ್ನಡ ಯುವಜನ ಸಂಘದ ಕಾರ್ಯದರ್ಶಿ ಮಹಾಂತೇಶ್ ದೇಗಾವಿ, ಜಗದೀಶ್ ರೆಡ್ಡಿ, ರಾಜು, ಕೆ.ಎಸ್.ಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಮನುಷ್ಯರಲ್ಲಿ ಅಹಂ ಭಾವ ಹೆಚ್ಚುತ್ತಿದೆ. ಅದರಿಂದ ಕೌಟುಂಬಿಕ ಕಲಹಗಳು ಹಾಗೂ ದೌರ್ಜನ್ಯಗಳೂ ಏರುತ್ತಿವೆ’ ಎಂದು ವಕೀಲರ ಸಾಹಿತ್ಯ ಕೂಟದ ಉಪಾಧ್ಯಕ್ಷೆ ಬಿ.ಜೆ.ಜಿ.ಸತ್ಯಶ್ರೀ ಹೇಳಿದರು.</p>.<p>ಹೊಂಬೇಗೌಡ ನಗರದ ಕನ್ನಡ ಯುವಜನ ಸಂಘ ಹಮ್ಮಿಕೊಂಡಿದ್ದ ‘ಮಹಿಳೆ ಮತ್ತು ಕಾನೂನು’ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಮಹಾತ್ಮ ಗಾಂಧೀಜಿಯವರ ಕನಸಿನ ಕೂಸು ‘ಗ್ರಾಮ ಸ್ವರಾಜ್’ ನನಸಾಗಿದ್ದರೆ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೈಹಿಕ ಹಾಗೂ ಮಾನಸಿಕ ದೌರ್ಜನ್ಯಗಳನ್ನು ತಡೆಯಬಹುದಿತ್ತು. ನಗರೀಕರಣ, ಜಾಗತೀಕರಣ ಮತ್ತು ಖಾಸಗೀಕರಣದ ಪ್ರಭಾವದಿಂದ ಮನುಷ್ಯ ಕೊಳ್ಳುಬಾಕುತನಕ್ಕೆ ಇಳಿದಿದ್ದಾನೆ. ಮಿತಿಮೀರಿದ ಸಂಪಾದನೆಗೆ ಕೈಒಡ್ಡುತ್ತಿದ್ದಾನೆ. ಜೊತೆಗೆ ದೌರ್ಜನ್ಯಗಳನ್ನೂ ಎಸಗುತ್ತಿದ್ದಾನೆ’ ಎಂದರು.</p>.<p>ಕನ್ನಡ ಯುವಜನ ಸಂಘದ ಕಾರ್ಯದರ್ಶಿ ಮಹಾಂತೇಶ್ ದೇಗಾವಿ, ಜಗದೀಶ್ ರೆಡ್ಡಿ, ರಾಜು, ಕೆ.ಎಸ್.ಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>