ಅನುಮೋದನೆಯಾಗಿದ್ದ ಪಟ್ಟಿಯಲ್ಲಿದ್ದ ಕಾಮಗಾರಿಗಳ ವೆಚ್ಚ ಮತ್ತು ಟೆಂಡರ್ ನಡೆಸಲಾದ ವೆಚ್ಚದ ನಡುವೆ ಭಾರಿ ವ್ಯತ್ಯಾಸವಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಲವು ಗುತ್ತಿಗೆದಾರರು ಹೈಕೋರ್ಟ್ಗೆ ನವೆಂಬರ್ 2ರಂದು ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ, ವಿಚಾರಣೆಗೂ ಮುನ್ನವೇ ಅರ್ಜಿ ಹಿಂಪಡೆದಿದ್ದಾರೆ. ಸಮಾಜ ಕಲ್ಯಾಣ ಸಚಿವರು, ಅಧಿಕಾರಿಗಳು ಭಾರಿ ಮೊತ್ತದ ಲಂಚ ಪಡೆದು ಟೆಂಡರ್ನಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು.