ಇದಕ್ಕೆ ಉತ್ತರ ನೀಡುವಾಗ ತಿರುಗೇಟು ನೀಡಿದ ಅಶ್ವತ್ಥನಾರಾಯಣ, ‘ನಾನು ಯಾವುದೇ ರಾಜಕೀಯ ವಂಶದಿಂದ ಬಂದವನಲ್ಲ. ರಾಜಕಾರಣ ಮಾಡಲೆಂದು ಬಂದವನು. ಆದರೆ, ವಾಮಮಾರ್ಗದಿಂದ ಬಂದವನಲ್ಲ. ಯಾರ ಮನೆ ಹಾಳು ಮಾಡಿಲ್ಲ.
ದ್ವೇಷ ರಾಜಕಾರಣ ಮಾಡಬೇಡಿ. ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಡಿ. ಕೆಲವು ದಿನಗಳಿಂದ ಟೀಸರ್, ಟ್ರೈಲರ್ ಬಿಡ್ತೇನೆ ಎಂದು ಈಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆರೋಪದಲ್ಲಿ ಏನೂ ಇಲ್ಲ’ ಎಂದರು.