<p><strong>ಬೆಂಗಳೂರು</strong>: ಬಿಎಂಎಸ್ ಸಂಸ್ಥೆಯ ಮೇಲಿನ ಆರೋಪ ಕುರಿತಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಆವೇಶ ಭರಿತರಾಗಿ ವಿಧಾನಸಭೆಯಲ್ಲಿ ಪರಸ್ಪರ ವಾಕ್ಸಮರ ನಡೆಸಿದರು.</p>.<p>ಕುಮಾರಸ್ವಾಮಿ ಮಾತನಾಡುವಾಗ ಶಾಂತವಾಗಿಯೇ ಆಲಿಸುತ್ತಿದ್ದ ಅಶ್ವತ್ಥನಾರಾಯಣ ತಮ್ಮ ಬಗ್ಗೆ ಆರೋಪ ಮಾಡಿದಾಗ ತಿರುಗೇಟು ನೀಡಲು ಮುಂದಾದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಂತಗೊಳಿಸಿ ಕೂರಿಸಿದರು.</p>.<p>ಕುಮಾರಸ್ವಾಮಿ ತಮ್ಮ ಮಾತಿನ ಆರಂಭದಲ್ಲಿ, ‘ಸಚಿವರೊಬ್ಬರು ರಾಮನಗರಕ್ಕೆ ಬಂದು ದಮ್ಮಿದೆಯೇ, ತಾಕತ್ತಿದೆಯಾ? ಯಾವನವನು ಕುಮಾರ. ವಿಧಾನಸೌಧಕ್ಕೆ ಬರುವುದಿಲ್ಲ ಎಂದು ಟೀಕಿಸಿದ್ದರು. ಅದಕ್ಕಾಗಿಯೇ ದಾಖಲೆ ಸಮೇತ ಬಂದಿದ್ದೇನೆ’ ಎಂದು ಕುಟುಕಿದರು.</p>.<p>ಇದಕ್ಕೆ ಉತ್ತರ ನೀಡುವಾಗ ತಿರುಗೇಟು ನೀಡಿದ ಅಶ್ವತ್ಥನಾರಾಯಣ, ‘ನಾನು ಯಾವುದೇ ರಾಜಕೀಯ ವಂಶದಿಂದ ಬಂದವನಲ್ಲ. ರಾಜಕಾರಣ ಮಾಡಲೆಂದು ಬಂದವನು. ಆದರೆ, ವಾಮಮಾರ್ಗದಿಂದ ಬಂದವನಲ್ಲ. ಯಾರ ಮನೆ ಹಾಳು ಮಾಡಿಲ್ಲ.<br />ದ್ವೇಷ ರಾಜಕಾರಣ ಮಾಡಬೇಡಿ. ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಡಿ. ಕೆಲವು ದಿನಗಳಿಂದ ಟೀಸರ್, ಟ್ರೈಲರ್ ಬಿಡ್ತೇನೆ ಎಂದು ಈಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆರೋಪದಲ್ಲಿ ಏನೂ ಇಲ್ಲ’ ಎಂದರು.</p>.<p>‘ಜನ ಪ್ರತಿನಿಧಿಯಾಗಿ ನಾವು ರಾಜಕೀಯವಾಗಿ ಎಲ್ಲ ಮಾತನಾಡಬಾರದಾ? ನಾವೇನು ಜನಪ್ರತಿನಿಧಿಗಳಲ್ವಾ? ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಲು ಬಂದಿದ್ದೇನೆ. ತನಿಖೆ ಮಾಡಿಸಿ, ಇಲಾಖೆಯಲ್ಲಿ ಒಂದೇ ಒಂದು ಕಡತ ಉಳಿಸಿಲ್ಲ’ ಎಂದು ಅವರು ಹೇಳಿದರು.</p>.<p>‘ನಾನು ದ್ವೇಷಕ್ಕಾಗಿ ವಿಷಯ ಪ್ರಸ್ತಾಪಿಸಿಲ್ಲ. ರಾಜ ವಂಶದಿಂದಲೂ ಬಂದಿಲ್ಲ. ಒಂದು ಉತ್ತಮ ಶಿಕ್ಷಣ ಸಂಸ್ಥೆ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗಬಾರದು ಮತ್ತು ನ್ಯಾಯದ ಪರವಾಗಿ ಧ್ವನಿ ಎತ್ತಬೇಕು ಎಂಬುದಷ್ಟೇ ನನ್ನ ಕಳಕಳಿ’ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.</p>.<p>‘ನನ್ನ ಬಗ್ಗೆ ಮಾತನಾಡಲು ನಿನಗೆ ಯೋಗ್ಯತೆ ಇದೆಯಾ. ನಾನು ಯಾರ ಮನೆಯನ್ನು ಹಾಳು ಮಾಡಿದ್ದೇನೆ’ ಎಂದು ಪ್ರಶ್ನಿಸಿದರು.</p>.<p>ಈ ಹಂತದಲ್ಲಿ ಸಿಟ್ಟಿಗೆದ್ದ ಅಶ್ವತ್ಥನಾರಾಯಣ ಅವರು, ‘ನನ್ನ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ ಇಲ್ಲ’ ಎಂದು ಗುಡುಗಿದರು. ಆಗ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದು, ಗದ್ದಲ ಸೃಷ್ಟಿಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಿಎಂಎಸ್ ಸಂಸ್ಥೆಯ ಮೇಲಿನ ಆರೋಪ ಕುರಿತಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಆವೇಶ ಭರಿತರಾಗಿ ವಿಧಾನಸಭೆಯಲ್ಲಿ ಪರಸ್ಪರ ವಾಕ್ಸಮರ ನಡೆಸಿದರು.</p>.<p>ಕುಮಾರಸ್ವಾಮಿ ಮಾತನಾಡುವಾಗ ಶಾಂತವಾಗಿಯೇ ಆಲಿಸುತ್ತಿದ್ದ ಅಶ್ವತ್ಥನಾರಾಯಣ ತಮ್ಮ ಬಗ್ಗೆ ಆರೋಪ ಮಾಡಿದಾಗ ತಿರುಗೇಟು ನೀಡಲು ಮುಂದಾದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಂತಗೊಳಿಸಿ ಕೂರಿಸಿದರು.</p>.<p>ಕುಮಾರಸ್ವಾಮಿ ತಮ್ಮ ಮಾತಿನ ಆರಂಭದಲ್ಲಿ, ‘ಸಚಿವರೊಬ್ಬರು ರಾಮನಗರಕ್ಕೆ ಬಂದು ದಮ್ಮಿದೆಯೇ, ತಾಕತ್ತಿದೆಯಾ? ಯಾವನವನು ಕುಮಾರ. ವಿಧಾನಸೌಧಕ್ಕೆ ಬರುವುದಿಲ್ಲ ಎಂದು ಟೀಕಿಸಿದ್ದರು. ಅದಕ್ಕಾಗಿಯೇ ದಾಖಲೆ ಸಮೇತ ಬಂದಿದ್ದೇನೆ’ ಎಂದು ಕುಟುಕಿದರು.</p>.<p>ಇದಕ್ಕೆ ಉತ್ತರ ನೀಡುವಾಗ ತಿರುಗೇಟು ನೀಡಿದ ಅಶ್ವತ್ಥನಾರಾಯಣ, ‘ನಾನು ಯಾವುದೇ ರಾಜಕೀಯ ವಂಶದಿಂದ ಬಂದವನಲ್ಲ. ರಾಜಕಾರಣ ಮಾಡಲೆಂದು ಬಂದವನು. ಆದರೆ, ವಾಮಮಾರ್ಗದಿಂದ ಬಂದವನಲ್ಲ. ಯಾರ ಮನೆ ಹಾಳು ಮಾಡಿಲ್ಲ.<br />ದ್ವೇಷ ರಾಜಕಾರಣ ಮಾಡಬೇಡಿ. ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಡಿ. ಕೆಲವು ದಿನಗಳಿಂದ ಟೀಸರ್, ಟ್ರೈಲರ್ ಬಿಡ್ತೇನೆ ಎಂದು ಈಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆರೋಪದಲ್ಲಿ ಏನೂ ಇಲ್ಲ’ ಎಂದರು.</p>.<p>‘ಜನ ಪ್ರತಿನಿಧಿಯಾಗಿ ನಾವು ರಾಜಕೀಯವಾಗಿ ಎಲ್ಲ ಮಾತನಾಡಬಾರದಾ? ನಾವೇನು ಜನಪ್ರತಿನಿಧಿಗಳಲ್ವಾ? ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಲು ಬಂದಿದ್ದೇನೆ. ತನಿಖೆ ಮಾಡಿಸಿ, ಇಲಾಖೆಯಲ್ಲಿ ಒಂದೇ ಒಂದು ಕಡತ ಉಳಿಸಿಲ್ಲ’ ಎಂದು ಅವರು ಹೇಳಿದರು.</p>.<p>‘ನಾನು ದ್ವೇಷಕ್ಕಾಗಿ ವಿಷಯ ಪ್ರಸ್ತಾಪಿಸಿಲ್ಲ. ರಾಜ ವಂಶದಿಂದಲೂ ಬಂದಿಲ್ಲ. ಒಂದು ಉತ್ತಮ ಶಿಕ್ಷಣ ಸಂಸ್ಥೆ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗಬಾರದು ಮತ್ತು ನ್ಯಾಯದ ಪರವಾಗಿ ಧ್ವನಿ ಎತ್ತಬೇಕು ಎಂಬುದಷ್ಟೇ ನನ್ನ ಕಳಕಳಿ’ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.</p>.<p>‘ನನ್ನ ಬಗ್ಗೆ ಮಾತನಾಡಲು ನಿನಗೆ ಯೋಗ್ಯತೆ ಇದೆಯಾ. ನಾನು ಯಾರ ಮನೆಯನ್ನು ಹಾಳು ಮಾಡಿದ್ದೇನೆ’ ಎಂದು ಪ್ರಶ್ನಿಸಿದರು.</p>.<p>ಈ ಹಂತದಲ್ಲಿ ಸಿಟ್ಟಿಗೆದ್ದ ಅಶ್ವತ್ಥನಾರಾಯಣ ಅವರು, ‘ನನ್ನ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ ಇಲ್ಲ’ ಎಂದು ಗುಡುಗಿದರು. ಆಗ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದು, ಗದ್ದಲ ಸೃಷ್ಟಿಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>