ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಮೈತ್ರಿ ಉತ್ತಮವಾಗಿರುತ್ತದೆ. ಎಚ್.ಡಿ. ದೇವೇಗೌಡರ ಆಲೋಚನೆಗಳು ಈಗಿನ ರಾಜಕೀಯದಲ್ಲಿ ನಡೆಯುವುದಿಲ್ಲ. ಅವರ ರಾಜಕಾರಣವೇ ಬೇರೆ. ಅವರು ಹೇಳುವುದನ್ನು ಹೇಳುತ್ತಾರೆ. ಕೇಳುವುದು, ಬಿಡುವುದು ನಮ್ಮ ನಿರ್ಧಾರ. ನಿಮ್ಮಷ್ಟಕ್ಕೆ ನೀವಿರಿ ಎಂದು ಅವರಿಗೆ ನಾವೆಲ್ಲ ಈಗಾಗಲೇ ಹೇಳಿದ್ದೇವೆ' ಎಂದು ತಿಳಿಸಿದರು.