ಕಾನೂನು ಸಚಿವ ಮಾಧುಸ್ವಾಮಿ ಹಲವಾರು ಕಾನೂನುಗಳನ್ನು ವಾಪಸ್ ಪಡೆದಿದ್ದಾರೆ. ಸದನದಲ್ಲಿ ಮಸೂದೆ ಮಂಡಿಸಿದಾಗ ಅಧ್ಯಕ್ಷರು ಯಾರು ಕಾನೂನು ಪರವಾಗಿ ಇರುವಿರಿ ಎಂದು ಕೇಳಿದಾಗ ನಾವು ಯಾವ ಜ್ಞಾನವಿಲ್ಲದೇ ಸುಮ್ಮನೆ ಕೈ ಎತ್ತುತ್ತೇವೆ. ಆದರೆ, ಕಾನೂನು ಏನೆಂಬುದು ಗೊತ್ತಿಲ್ಲ. ಆದರೂ ಬಹುಮತ ಇದ್ದವರು ಹೇಳಿದ್ದು ಒಪ್ಪಿತವಾಗುತ್ತದೆ ಎಂದರು.