<p><strong>ಗೋಣಿಕೊಪ್ಪಲು: </strong>ತರಕಾರಿ ಚೀಲದೊಂದಿಗೆ ಅಕ್ರಮವಾಗಿ ಮದ್ಯ ಬಾಟಲ್ ತುಂಬಿಸಿಕೊಂಡು ಕೇರಳಕ್ಕೆ ಹೋಗುತ್ತಿದ್ದ ವಾಹನವನ್ನು ಪತ್ತೆ ಹಚ್ಚಿದ ಗೋಣಿಕೊಪ್ಪಲು ಪೊಲೀಸರು ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.</p>.<p>ಕೇರಳದ ಇರಟಿಯ ಅನೂಪ್ ಹಾಗೂ ಉದಯ ಕುಮಾರ್ ಬಂಧಿತರು.</p>.<p>ಹುಣಸೂರಿನಿಂದ ತರಕಾರಿ ತುಂಬಿದ ಲಾರಿಯಲ್ಲಿ ತಲಾ ಒಂದು ಲೀಟರಿನ ಓಲ್ಡ್ ಅಡ್ಮಿರಲ್ ಕಂಪನಿಯ 212 ಬಾಟಲ್, ಬಿಜಾಯ್ಸ್ ಕಂಪನಿಯ 78 ಬಾಟಲ್ ಸೇರಿದಂತೆ ಒಟ್ಟು 290 ಮದ್ಯದ ಬಾಟಲ್ ಗಳನ್ನು ಶೇಖರಿಸಿದ್ದರು ಎನ್ನಲಾಗಿದೆ.</p>.<p>ಆನೆ ಚೌಕೂರು ಗೇಟಿನ ಬಳಿ ಲಾರಿ ಬಂದಾಗ ತಪಾಸಣೆ ನಡೆಸಿದ ಪೊಲೀಸರಿಗೆ ಪ್ರಕರಣ ಪತ್ತೆಯಾಗಿದೆ. ಡಿವೈಎಸ್ಪಿ ಜಯಕುಮಾರ್ ಅವರ ನಿರ್ದೇಶನದ ಮೇರೆಗೆ ಕೂಡಲೆ ಸ್ಥಳಕ್ಕೆ ಧಾವಿಸಿದ ಗೋಣಿಕೊಪ್ಪಲು ಸಿಪಿಐ ಜಯರಾಮ್, ಪಿಎಸ್ ಐ ಸುಬ್ಬಯ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದರು.</p>.<p>ಅಂದಾಜು ₹1.20ಲಕ್ಷ ಮೌಲ್ಯದ ಮದ್ಯ ಇದೆ ಎಂದು ಸಿಪಿಐ ಜಯರಾಮ್ ತಿಳಿಸಿದರು. ಎಎಸ್ ಐ ದೇವರಾಜು, ಸಿಬ್ಬಂದಿ ರಾಘವೇಂದ್ರ, ಉಮೇಶ್, ಶೇಖರ್ ಕಾರ್ಯಾಚರಣೆ ತಂಡದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು: </strong>ತರಕಾರಿ ಚೀಲದೊಂದಿಗೆ ಅಕ್ರಮವಾಗಿ ಮದ್ಯ ಬಾಟಲ್ ತುಂಬಿಸಿಕೊಂಡು ಕೇರಳಕ್ಕೆ ಹೋಗುತ್ತಿದ್ದ ವಾಹನವನ್ನು ಪತ್ತೆ ಹಚ್ಚಿದ ಗೋಣಿಕೊಪ್ಪಲು ಪೊಲೀಸರು ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.</p>.<p>ಕೇರಳದ ಇರಟಿಯ ಅನೂಪ್ ಹಾಗೂ ಉದಯ ಕುಮಾರ್ ಬಂಧಿತರು.</p>.<p>ಹುಣಸೂರಿನಿಂದ ತರಕಾರಿ ತುಂಬಿದ ಲಾರಿಯಲ್ಲಿ ತಲಾ ಒಂದು ಲೀಟರಿನ ಓಲ್ಡ್ ಅಡ್ಮಿರಲ್ ಕಂಪನಿಯ 212 ಬಾಟಲ್, ಬಿಜಾಯ್ಸ್ ಕಂಪನಿಯ 78 ಬಾಟಲ್ ಸೇರಿದಂತೆ ಒಟ್ಟು 290 ಮದ್ಯದ ಬಾಟಲ್ ಗಳನ್ನು ಶೇಖರಿಸಿದ್ದರು ಎನ್ನಲಾಗಿದೆ.</p>.<p>ಆನೆ ಚೌಕೂರು ಗೇಟಿನ ಬಳಿ ಲಾರಿ ಬಂದಾಗ ತಪಾಸಣೆ ನಡೆಸಿದ ಪೊಲೀಸರಿಗೆ ಪ್ರಕರಣ ಪತ್ತೆಯಾಗಿದೆ. ಡಿವೈಎಸ್ಪಿ ಜಯಕುಮಾರ್ ಅವರ ನಿರ್ದೇಶನದ ಮೇರೆಗೆ ಕೂಡಲೆ ಸ್ಥಳಕ್ಕೆ ಧಾವಿಸಿದ ಗೋಣಿಕೊಪ್ಪಲು ಸಿಪಿಐ ಜಯರಾಮ್, ಪಿಎಸ್ ಐ ಸುಬ್ಬಯ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದರು.</p>.<p>ಅಂದಾಜು ₹1.20ಲಕ್ಷ ಮೌಲ್ಯದ ಮದ್ಯ ಇದೆ ಎಂದು ಸಿಪಿಐ ಜಯರಾಮ್ ತಿಳಿಸಿದರು. ಎಎಸ್ ಐ ದೇವರಾಜು, ಸಿಬ್ಬಂದಿ ರಾಘವೇಂದ್ರ, ಉಮೇಶ್, ಶೇಖರ್ ಕಾರ್ಯಾಚರಣೆ ತಂಡದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>