ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಬರಹ, ಭಾಷಣಕ್ಕೆ ಆಡಿಯೊ ರೂಪ

ಮಾಲೂರಿನಲ್ಲಿ 19ರಂದು ಪ್ರಥಮ ಸಂಪುಟದ ಆಡಿಯೊ ಬಿಡುಗಡೆ
Last Updated 15 ಫೆಬ್ರುವರಿ 2023, 19:50 IST
ಅಕ್ಷರ ಗಾತ್ರ

ಕೋಲಾರ: ಆನಂದ್ ಸಿದ್ಧಾರ್ಥ ಅವರ ‘ಸ್ಯಾಮ್ ಆಡಿಯೊ’ ಸಂಸ್ಥೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹ ಹಾಗೂ ಭಾಷಣದ‌ 22 ಸಂಪುಟಗಳನ್ನು ಆಡಿಯೊ ರೂಪದಲ್ಲಿ ಹೊರತರುತ್ತಿದೆ. ಫೆ.19ರಂದು ಮಾಲೂರಿನಲ್ಲಿ ಪ್ರಥಮ ಸಂಪುಟದ ಆಡಿಯೊ ಬಿಡುಗಡೆ ಮಾಡಲಾಗುತ್ತಿದೆ.

ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಸಂಪುಟದ ಆಡಿಯೊ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಉಪನ್ಯಾಸಕ ಮಂಜುನಾಥ್ ಆರ್‌.ಹುಣಸಿಕೋಟೆ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

'ದೇಶದಲ್ಲಿಯೇ ಪ್ರಥಮ ಬಾರಿ ಅಂಬೇಡ್ಕರ್ ಅವರ ಸಂಪೂರ್ಣ ಬರಹ–ಭಾಷಣಗಳನ್ನು ಆಡಿಯೊ ಬುಕ್‌ ರೂಪದಲ್ಲಿ ತರಲಾಗುತ್ತಿದೆ. ಎರಡು ವರ್ಷದ ಶ್ರಮ ಇದು. ಸುಮಾರು ₹75 ಲಕ್ಷ ಖರ್ಚಾಗಿದೆ. ಈ ಹಣವನ್ನು ಆನಂದ್‌ ಸಿದ್ಧಾರ್ಥ ಭರಿಸಿದ್ದಾರೆ’ ಎಂದು ತಿಳಿಸಿದರು.

ಮೊದಲ ಸಂಪುಟ 16.30 ಗಂಟೆ ಆಡಿಯೊ ಒಳಗೊಂಡಿದೆ. ಮೊಬೈಲ್‌ನಲ್ಲಿ ‘sam audio’s' ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡು ಕೇಳಬಹುದು. ಉದ್ಘಾಟನೆ ಬಳಿಕ ಆ್ಯಪ್‌ ಲಭ್ಯವಾಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT