<p>ಬಾಗಲಕೋಟೆ: ‘ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರ ಆಪ್ತರು ಕಮಿಷನ್ ಆಸೆಗಾಗಿ ಟೆಂಡರ್ ಅನ್ನು ರಾಜ್ಯಮಟ್ಟದ ಗುತ್ತಿಗೆದಾರರಿಗೆ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಬಾದಾಮಿ ತಾಲ್ಲೂಕು ಗುತ್ತಿಗೆದಾರರ ಸಂಘ ಆರೋಪಿಸಿದೆ.</p>.<p>ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಬಿ. ಹೊಸಗೌಡರ ಮತ್ತು ಗುತ್ತಿಗೆದಾರ ಬಾಲಪ್ಪ ನಂದೆಪ್ಪನವರ್, ‘ಸ್ಥಳೀಯ ಪ್ರಥಮದರ್ಜೆ ಗುತ್ತಿಗೆದಾರರು ₹3 ಕೋಟಿ ಮೊತ್ತದವರೆಗಿನ ಟೆಂಡರ್ ಪಡೆಯಬಹುದಾಗಿದೆ. ಆದರೆ, ಸ್ಥಳೀಯರಿಗೆ ತಪ್ಪಿಸಲು ಮೂರು ನಾಲ್ಕು ಕಾಮಗಾರಿಗಳನ್ನು ಸೇರಿಸಿ ಪ್ಯಾಕೇಜ್ ಮಾಡಿ ಹೆಚ್ಚಿನ ಮೊತ್ತದ ಒಂದೇ ಟೆಂಡರ್ ಕರೆದು ಹೊರಗಿನವರಿಗೆ ಸಿಗುವಂತೆ ಮಾಡಲಾಗುತ್ತಿದೆ’ ಎಂದು ದೂರಿದರು.</p>.<p>‘ವೈಯಕ್ತಿಕವಾಗಿ ಶೇ 10 ರಿಂದ 15ರಷ್ಟು ಕಮಿಷನ್ ನಡೆಯುತ್ತಿದೆ. ಒಟ್ಟಾರೆ ಶೇ 40 ಮೀರುತ್ತದೆ. ಎಲ್ಲವೂ ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್ ಮುಖಂಡ ಹೊಳೆಬಸು ಶೆಟ್ಟರ್ ಹೇಳಿದಂತೆ ನಡೆಯುತ್ತಿದೆ. ಸ್ಥಳೀಯ ಗುತ್ತಿಗೆ<br />ದಾರರು ವಾಹನಗಳನ್ನು ಮಾರುವ ಸ್ಥಿತಿ ಬಂದಿದೆ’ ಎಂದು ಹೇಳಿದರು.</p>.<p>‘ಈ ಬಗ್ಗೆ ಸಿದ್ದರಾಮಯ್ಯ ಅವರನ್ನು ದೂರುವುದಿಲ್ಲ. ಅವರ ಗಮನಕ್ಕೆ ಬಾರದಂತೆ ಹಿಂಬಾಲಕರು ನಿಭಾಯಿಸುತ್ತಿದ್ದಾರೆ. ಬಾದಾಮಿಗೆ ಬಂದಾಗ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಅವರ ಹಿಂಬಾಲಕರು ಬಿಡುವುದಿಲ್ಲ’ ಎಂದರು.</p>.<p>‘ಟೆಂಡರ್ ಕರೆಯುವಾಗ ಪಾರದರ್ಶಕತೆ ಕಾಪಾಡಬೇಕು. ಇಲ್ಲದಿದ್ದರೆ, ಕಾನೂನು ಹೋರಾಟ ಮಾಡುವ ಜತೆಗೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗುವುದು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗಲಕೋಟೆ: ‘ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರ ಆಪ್ತರು ಕಮಿಷನ್ ಆಸೆಗಾಗಿ ಟೆಂಡರ್ ಅನ್ನು ರಾಜ್ಯಮಟ್ಟದ ಗುತ್ತಿಗೆದಾರರಿಗೆ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಬಾದಾಮಿ ತಾಲ್ಲೂಕು ಗುತ್ತಿಗೆದಾರರ ಸಂಘ ಆರೋಪಿಸಿದೆ.</p>.<p>ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಬಿ. ಹೊಸಗೌಡರ ಮತ್ತು ಗುತ್ತಿಗೆದಾರ ಬಾಲಪ್ಪ ನಂದೆಪ್ಪನವರ್, ‘ಸ್ಥಳೀಯ ಪ್ರಥಮದರ್ಜೆ ಗುತ್ತಿಗೆದಾರರು ₹3 ಕೋಟಿ ಮೊತ್ತದವರೆಗಿನ ಟೆಂಡರ್ ಪಡೆಯಬಹುದಾಗಿದೆ. ಆದರೆ, ಸ್ಥಳೀಯರಿಗೆ ತಪ್ಪಿಸಲು ಮೂರು ನಾಲ್ಕು ಕಾಮಗಾರಿಗಳನ್ನು ಸೇರಿಸಿ ಪ್ಯಾಕೇಜ್ ಮಾಡಿ ಹೆಚ್ಚಿನ ಮೊತ್ತದ ಒಂದೇ ಟೆಂಡರ್ ಕರೆದು ಹೊರಗಿನವರಿಗೆ ಸಿಗುವಂತೆ ಮಾಡಲಾಗುತ್ತಿದೆ’ ಎಂದು ದೂರಿದರು.</p>.<p>‘ವೈಯಕ್ತಿಕವಾಗಿ ಶೇ 10 ರಿಂದ 15ರಷ್ಟು ಕಮಿಷನ್ ನಡೆಯುತ್ತಿದೆ. ಒಟ್ಟಾರೆ ಶೇ 40 ಮೀರುತ್ತದೆ. ಎಲ್ಲವೂ ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್ ಮುಖಂಡ ಹೊಳೆಬಸು ಶೆಟ್ಟರ್ ಹೇಳಿದಂತೆ ನಡೆಯುತ್ತಿದೆ. ಸ್ಥಳೀಯ ಗುತ್ತಿಗೆ<br />ದಾರರು ವಾಹನಗಳನ್ನು ಮಾರುವ ಸ್ಥಿತಿ ಬಂದಿದೆ’ ಎಂದು ಹೇಳಿದರು.</p>.<p>‘ಈ ಬಗ್ಗೆ ಸಿದ್ದರಾಮಯ್ಯ ಅವರನ್ನು ದೂರುವುದಿಲ್ಲ. ಅವರ ಗಮನಕ್ಕೆ ಬಾರದಂತೆ ಹಿಂಬಾಲಕರು ನಿಭಾಯಿಸುತ್ತಿದ್ದಾರೆ. ಬಾದಾಮಿಗೆ ಬಂದಾಗ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಅವರ ಹಿಂಬಾಲಕರು ಬಿಡುವುದಿಲ್ಲ’ ಎಂದರು.</p>.<p>‘ಟೆಂಡರ್ ಕರೆಯುವಾಗ ಪಾರದರ್ಶಕತೆ ಕಾಪಾಡಬೇಕು. ಇಲ್ಲದಿದ್ದರೆ, ಕಾನೂನು ಹೋರಾಟ ಮಾಡುವ ಜತೆಗೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗುವುದು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>