ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಬಿ. ಹೊಸಗೌಡರ ಮತ್ತು ಗುತ್ತಿಗೆದಾರ ಬಾಲಪ್ಪ ನಂದೆಪ್ಪನವರ್, ‘ಸ್ಥಳೀಯ ಪ್ರಥಮದರ್ಜೆ ಗುತ್ತಿಗೆದಾರರು ₹3 ಕೋಟಿ ಮೊತ್ತದವರೆಗಿನ ಟೆಂಡರ್ ಪಡೆಯಬಹುದಾಗಿದೆ. ಆದರೆ, ಸ್ಥಳೀಯರಿಗೆ ತಪ್ಪಿಸಲು ಮೂರು ನಾಲ್ಕು ಕಾಮಗಾರಿಗಳನ್ನು ಸೇರಿಸಿ ಪ್ಯಾಕೇಜ್ ಮಾಡಿ ಹೆಚ್ಚಿನ ಮೊತ್ತದ ಒಂದೇ ಟೆಂಡರ್ ಕರೆದು ಹೊರಗಿನವರಿಗೆ ಸಿಗುವಂತೆ ಮಾಡಲಾಗುತ್ತಿದೆ’ ಎಂದು ದೂರಿದರು.