‘ಶಿವಕುಮಾರ ಸ್ವಾಮೀಜಿಯವರು ನಾಗರಿಕ ಸಮಾಜದಲ್ಲಿನ ಅಂಧಕಾರವನ್ನು ತೊಲಗಿಸಿ ವಿದ್ಯೆಯೆಂಬ ಬೆಳಕು ನೀಡಿದವರು. ಇಡೀ ವಿಶ್ವಕ್ಕೆ ದಾಸೋಹದ ಮಹತ್ವ ಸಾರಿದ್ದವರು. ಶಿವಕುಮಾರ ಸ್ವಾಮೀಜಿ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿಯವರ ಆಶೀರ್ವಾದದಿಂದಾಗಿ ನಾನು ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಸ್ಥಾನಗಳನ್ನು ಅಲಂಕರಿಸಲು ಸಾಧ್ಯವಾಯಿತು. ಅವರಿಬ್ಬರು ಮಹಾನ್ ತಪಸ್ವಿಗಳು. ಶಿವಕುಮಾರ ಸ್ವಾಮೀಜಿಯವರ ಆದರ್ಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಆಳವಡಿಕೊಂಡು ಎಲ್ಲರ ಪ್ರೀತಿ ವಿಶ್ವಾಸ ಗಳಿಸಬೇಕು’ ಎಂದರು.