ಉಸಿರಾಟದ ತೊಂದರೆ ಇದ್ದವರನ್ನು ಹಾಗೂ ಆಮ್ಲಜನಕ ಪೂರೈಕೆಯ ಅವಶ್ಯಕತೆ ಇರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲು ಹಾಗೂ ಇನ್ನುಳಿದ ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲು ಸೋಮವಾರ ನಡೆದ ಸಚಿವರು, ಶಾಸಕರು ಹಾಗೂ ಸಂಸದರ ಸಭೆಯ ಬಳಿಕ ಸರ್ಕಾರ ತೀರ್ಮಾನಿಸಿದೆ. ಆದರೆ, ಈ ತೀರ್ಮಾನವನ್ನು ಜಾರಿಗೊಳಿಸಲು ಅವಶ್ಯವಿರುವಷ್ಟು ಪ್ರಮಾಣದ ಕೋವಿಡ್ ಆರೈಕೆ ಕೇಂದ್ರಗಳೂ ನಗರದಲ್ಲಿಲ್ಲ.