<p><strong>ಬೆಳಗಾವಿ/ಬೆಂಗಳೂರು</strong>: ಪಡಿತರ ಅಕ್ಕಿ ಕಡಿತಗೊಳಿಸಿದ್ದನ್ನು ಪ್ರಶ್ನಿಸಿದ ರೈತರೊಬ್ಬರಿಗೆ ‘ಸತ್ತು ಹೋದರೆ ಒಳ್ಳೆಯದು’ ಎಂದು ಆಹಾರ ಸಚಿವ ಉಮೇಶ ಕತ್ತಿ ನೀಡಿರುವ ಪ್ರತಿಕ್ರಿಯೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.</p>.<p>ತಾವು ಆಡಿದ ಮಾತುಗಳ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಚಿವ ಕತ್ತಿ ಬುಧವಾರ ಸಂಜೆ ಕ್ಷಮೆ ಕೋರಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕತ್ತಿಯವರನ್ನು ತರಾಟೆಗೆ ತೆಗೆದುಕೊಳ್ಳುವುದರ ಜತೆಗೆ, ಈ ಕುರಿತು ವಿಷಾದ ವ್ಯಕ್ತಪಡಿಸಿದರು. ‘ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿ ನೀಡಲು ಸಿದ್ಧ’ ಎಂದೂ ವಾಗ್ದಾನ ಮಾಡಿದರು.</p>.<p>ಕತ್ತಿ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆಗ್ರಹಿಸಿದರು.</p>.<p><strong>ಆಗಿದ್ದೇನು</strong>?: ಗದಗ ಜಿಲ್ಲೆಯ ರೈತ ಸಂಘದ ಕಾರ್ಯಕರ್ತ ಈಶ್ವರ ಅವರು ಒಂದೆರಡು ದಿನಗಳ ಹಿಂದೆ ಸಚಿವರ ಮೊಬೈಲ್ ಫೋನ್ಗೆ ಕರೆ ಮಾಡಿ, ‘ಲಾಕ್ಡೌನ್ ಸಂದರ್ಭದಲ್ಲೂ ಕೇವಲ 2 ಕೆ.ಜಿ. ಅಕ್ಕಿ ಕೊಡುತ್ತಿದ್ದೀರಿ. ಇಷ್ಟು ಕಡಿಮೆ ಅಕ್ಕಿಯಲ್ಲಿ ನಾವು ಬದುಕುವುದಾದರೂ ಹೇಗೆ?’ ಎಂದು ಪ್ರಶ್ನಿಸಿದ್ದರು.</p>.<p>ಇದಕ್ಕೆ ಉತ್ತರಿಸಿದ ಸಚಿವರು, ‘2 ಕೆ.ಜಿ. ಅಕ್ಕಿ ಜೊತೆಗೆ 3 ಕೆ.ಜಿ. ರಾಗಿ ಕೊಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ 3 ಕೆ.ಜಿ. ಜೋಳ ನೀಡುತ್ತಿದ್ದೇವೆ. ಒಟ್ಟು 5 ಕೆ.ಜಿ. ಪಡಿತರ ವಿತರಿಸಲಾಗುತ್ತಿದೆ’ ಎಂದರು. ‘ಹೀಗಾದರೆ ನಾವು ಉಪವಾಸ ಇರೋದಾ ಅಥವಾ ಸತ್ತು ಹೋಗೋದಾ’ ಎಂದು ರೈತ ಖಾರವಾಗಿ ಪ್ರಶ್ನಿಸಿದರು. ಸಿಟ್ಟಿಗೆದ್ದ ಕತ್ತಿ, ‘ಸತ್ತು ಹೋಗೋದು ಒಳಿತು’ ಎಂದು ಪ್ರತಿಕ್ರಿಯಿಸಿದರು.</p>.<p><strong>ಆಗಿದ್ದೇನು</strong>?: ಗದಗ ಜಿಲ್ಲೆಯ ರೈತ ಸಂಘದ ಕಾರ್ಯಕರ್ತ ಈಶ್ವರ ಅವರು ಒಂದೆರಡು ದಿನಗಳ ಹಿಂದೆ ಸಚಿವರ ಮೊಬೈಲ್ ಫೋನ್ಗೆ ಕರೆ ಮಾಡಿ, ‘ಲಾಕ್ಡೌನ್ ಸಂದರ್ಭದಲ್ಲೂ ಕೇವಲ 2 ಕೆ.ಜಿ. ಅಕ್ಕಿ ಕೊಡುತ್ತಿದ್ದೀರಿ. ಇಷ್ಟು ಕಡಿಮೆ ಅಕ್ಕಿಯಲ್ಲಿ ನಾವು ಬದುಕುವುದಾದರೂ ಹೇಗೆ?’ ಎಂದು ಪ್ರಶ್ನಿಸಿದ್ದರು.</p>.<p>ಇದಕ್ಕೆ ಉತ್ತರಿಸಿದ ಸಚಿವರು, ‘2 ಕೆ.ಜಿ. ಅಕ್ಕಿ ಜೊತೆಗೆ 3 ಕೆ.ಜಿ. ರಾಗಿ ಕೊಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ 3 ಕೆ.ಜಿ. ಜೋಳ ನೀಡುತ್ತಿದ್ದೇವೆ. ಒಟ್ಟು 5 ಕೆ.ಜಿ. ಪಡಿತರ ವಿತರಿಸಲಾಗುತ್ತಿದೆ’ ಎಂದರು. ‘ಹೀಗಾದರೆ ನಾವು ಉಪವಾಸ ಇರೋದಾ ಅಥವಾ ಸತ್ತು ಹೋಗೋದಾ’ ಎಂದು ರೈತ ಖಾರವಾಗಿ ಪ್ರಶ್ನಿಸಿದ. ಸಿಟ್ಟಿಗೆದ್ದ ಕತ್ತಿ, ‘ಸತ್ತು ಹೋಗೋದು ಒಳಿತು’ ಎಂದು ಪ್ರತಿಕ್ರಿಯಿಸಿದರು.</p>.<p>ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ನಾನು ಯಾರೊಂದಿಗೂ ಆ ರೀತಿ ಮಾತನಾಡಿಯೇ ಇಲ್ಲ’ ಎಂದು ವಾದಿಸಿದರು. ಆ ಬಳಿಕ, ‘ಸತ್ತು ಹೋಗೋದಾ ಎಂದು ಕೇಳಿದವರಿಗೆ ಏನೆನ್ನುವುದು? ಸತ್ತು ಹೋದರೆ ಒಳ್ಳೆಯದು ಎಂದು ಆಡುಭಾಷೆಯಲ್ಲಿ ಹೇಳಿದ್ದೇನೆ. ಬದುಕು ಎಂದು ಹೇಳುವಷ್ಟು ದೊಡ್ಡ ಮನಸ್ಸು ನನಗಿಲ್ಲ. ರಾಜ್ಯದ ಪ್ರತಿಯೊಬ್ಬರೂ ಇದೇ ರೀತಿ ಕೇಳಿದರೆ ಎಷ್ಟು ಮಂದಿಗೆ ಉತ್ತರ ಕೊಡುವುದು?’ ಎಂದು ಸಮರ್ಥಿಸಿಕೊಂಡಿದ್ದರು.</p>.<p><strong>ದೂರವಾಣಿ ಸಂಭಾಷಣೆ ವಿವರ<br />ವ್ಯಕ್ತಿ</strong>: 2.ಕೆ.ಜಿ. ಅಕ್ಕಿ ಮಾಡಿದ್ದೀರಲ್ಲಾ ಸಾಲುತ್ತಾ?<br /><strong>ಸಚಿವ</strong>: 3 ಕೆ.ಜಿ. ರಾಗಿ ಕೊಡ್ತಿದ್ದೀವಿ.</p>.<p><strong>ವ್ಯಕ್ತಿ</strong>: ನಮ್ಮ ಉತ್ತರ ಕರ್ನಾಟಕ ಭಾಗಕ್ಕೆ ರಾಗಿ ಎಲ್ಲಿ ಕೊಡುತ್ತೀರಾ?<br /><strong>ಸಚಿವ</strong>: ಉತ್ತರ ಕರ್ನಾಟಕ ಭಾಗಕ್ಕೆ ಜೋಳ ಮತ್ತು ಅಕ್ಕಿ ಮಾಡಿದ್ದೀವಿ.</p>.<p><strong>ವ್ಯಕ್ತಿ: </strong>ಸಾಲುತ್ತಾ ಸಾರ್? ಈಗ ಲಾಕ್ಡೌನ್ ಬೇರೆ ಇದೆ. ದುಡಿಮೆ ಇಲ್ಲ.<br /><strong>ಸಚಿವ</strong>: ಕೇಂದ್ರ ಸರ್ಕಾರ ಕೊಡ್ತಿದೆ. ಮೇ, ಜೂನ್ನಲ್ಲಿ 5 ಕೆ.ಜಿ. ಅಕ್ಕಿ ಕೊಡುತ್ತದೆ.</p>.<p><strong>ವ್ಯಕ್ತಿ</strong>: ಯಾವಾಗ ಕೊಡ್ತೀರಾ?<br /><strong>ಸಚಿವ</strong>: ಬರುವ ತಿಂಗಳು.</p>.<p><strong>ವ್ಯಕ್ತಿ</strong>: ಅಲ್ಲಿವರೆಗೆ ಉಪವಾಸ ಇರದಾ ಸರ್? ಸತ್ಹೋಗ್ಬಿಡೋದಾ?<br /><strong>ಸಚಿವ</strong>: ಸತ್ತು ಹೋದರೆ ಒಳ್ಳೆಯದು. ಅದಕ್ಕಿಂತ, ಅಕ್ಕಿ ಮಾರುವ ದಂಧೆ ಬಂದ್ ಮಾಡಿ. ಮತ್ತೆ ಫೋನ್ ಮಾಡಬೇಡಿ.</p>.<p><strong>ದೂರವಾಣಿ ಸಂಭಾಷಣೆಯಆಡಿಯೊ ಕೇಳಿ..</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ/ಬೆಂಗಳೂರು</strong>: ಪಡಿತರ ಅಕ್ಕಿ ಕಡಿತಗೊಳಿಸಿದ್ದನ್ನು ಪ್ರಶ್ನಿಸಿದ ರೈತರೊಬ್ಬರಿಗೆ ‘ಸತ್ತು ಹೋದರೆ ಒಳ್ಳೆಯದು’ ಎಂದು ಆಹಾರ ಸಚಿವ ಉಮೇಶ ಕತ್ತಿ ನೀಡಿರುವ ಪ್ರತಿಕ್ರಿಯೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.</p>.<p>ತಾವು ಆಡಿದ ಮಾತುಗಳ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಚಿವ ಕತ್ತಿ ಬುಧವಾರ ಸಂಜೆ ಕ್ಷಮೆ ಕೋರಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕತ್ತಿಯವರನ್ನು ತರಾಟೆಗೆ ತೆಗೆದುಕೊಳ್ಳುವುದರ ಜತೆಗೆ, ಈ ಕುರಿತು ವಿಷಾದ ವ್ಯಕ್ತಪಡಿಸಿದರು. ‘ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿ ನೀಡಲು ಸಿದ್ಧ’ ಎಂದೂ ವಾಗ್ದಾನ ಮಾಡಿದರು.</p>.<p>ಕತ್ತಿ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆಗ್ರಹಿಸಿದರು.</p>.<p><strong>ಆಗಿದ್ದೇನು</strong>?: ಗದಗ ಜಿಲ್ಲೆಯ ರೈತ ಸಂಘದ ಕಾರ್ಯಕರ್ತ ಈಶ್ವರ ಅವರು ಒಂದೆರಡು ದಿನಗಳ ಹಿಂದೆ ಸಚಿವರ ಮೊಬೈಲ್ ಫೋನ್ಗೆ ಕರೆ ಮಾಡಿ, ‘ಲಾಕ್ಡೌನ್ ಸಂದರ್ಭದಲ್ಲೂ ಕೇವಲ 2 ಕೆ.ಜಿ. ಅಕ್ಕಿ ಕೊಡುತ್ತಿದ್ದೀರಿ. ಇಷ್ಟು ಕಡಿಮೆ ಅಕ್ಕಿಯಲ್ಲಿ ನಾವು ಬದುಕುವುದಾದರೂ ಹೇಗೆ?’ ಎಂದು ಪ್ರಶ್ನಿಸಿದ್ದರು.</p>.<p>ಇದಕ್ಕೆ ಉತ್ತರಿಸಿದ ಸಚಿವರು, ‘2 ಕೆ.ಜಿ. ಅಕ್ಕಿ ಜೊತೆಗೆ 3 ಕೆ.ಜಿ. ರಾಗಿ ಕೊಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ 3 ಕೆ.ಜಿ. ಜೋಳ ನೀಡುತ್ತಿದ್ದೇವೆ. ಒಟ್ಟು 5 ಕೆ.ಜಿ. ಪಡಿತರ ವಿತರಿಸಲಾಗುತ್ತಿದೆ’ ಎಂದರು. ‘ಹೀಗಾದರೆ ನಾವು ಉಪವಾಸ ಇರೋದಾ ಅಥವಾ ಸತ್ತು ಹೋಗೋದಾ’ ಎಂದು ರೈತ ಖಾರವಾಗಿ ಪ್ರಶ್ನಿಸಿದರು. ಸಿಟ್ಟಿಗೆದ್ದ ಕತ್ತಿ, ‘ಸತ್ತು ಹೋಗೋದು ಒಳಿತು’ ಎಂದು ಪ್ರತಿಕ್ರಿಯಿಸಿದರು.</p>.<p><strong>ಆಗಿದ್ದೇನು</strong>?: ಗದಗ ಜಿಲ್ಲೆಯ ರೈತ ಸಂಘದ ಕಾರ್ಯಕರ್ತ ಈಶ್ವರ ಅವರು ಒಂದೆರಡು ದಿನಗಳ ಹಿಂದೆ ಸಚಿವರ ಮೊಬೈಲ್ ಫೋನ್ಗೆ ಕರೆ ಮಾಡಿ, ‘ಲಾಕ್ಡೌನ್ ಸಂದರ್ಭದಲ್ಲೂ ಕೇವಲ 2 ಕೆ.ಜಿ. ಅಕ್ಕಿ ಕೊಡುತ್ತಿದ್ದೀರಿ. ಇಷ್ಟು ಕಡಿಮೆ ಅಕ್ಕಿಯಲ್ಲಿ ನಾವು ಬದುಕುವುದಾದರೂ ಹೇಗೆ?’ ಎಂದು ಪ್ರಶ್ನಿಸಿದ್ದರು.</p>.<p>ಇದಕ್ಕೆ ಉತ್ತರಿಸಿದ ಸಚಿವರು, ‘2 ಕೆ.ಜಿ. ಅಕ್ಕಿ ಜೊತೆಗೆ 3 ಕೆ.ಜಿ. ರಾಗಿ ಕೊಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ 3 ಕೆ.ಜಿ. ಜೋಳ ನೀಡುತ್ತಿದ್ದೇವೆ. ಒಟ್ಟು 5 ಕೆ.ಜಿ. ಪಡಿತರ ವಿತರಿಸಲಾಗುತ್ತಿದೆ’ ಎಂದರು. ‘ಹೀಗಾದರೆ ನಾವು ಉಪವಾಸ ಇರೋದಾ ಅಥವಾ ಸತ್ತು ಹೋಗೋದಾ’ ಎಂದು ರೈತ ಖಾರವಾಗಿ ಪ್ರಶ್ನಿಸಿದ. ಸಿಟ್ಟಿಗೆದ್ದ ಕತ್ತಿ, ‘ಸತ್ತು ಹೋಗೋದು ಒಳಿತು’ ಎಂದು ಪ್ರತಿಕ್ರಿಯಿಸಿದರು.</p>.<p>ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ನಾನು ಯಾರೊಂದಿಗೂ ಆ ರೀತಿ ಮಾತನಾಡಿಯೇ ಇಲ್ಲ’ ಎಂದು ವಾದಿಸಿದರು. ಆ ಬಳಿಕ, ‘ಸತ್ತು ಹೋಗೋದಾ ಎಂದು ಕೇಳಿದವರಿಗೆ ಏನೆನ್ನುವುದು? ಸತ್ತು ಹೋದರೆ ಒಳ್ಳೆಯದು ಎಂದು ಆಡುಭಾಷೆಯಲ್ಲಿ ಹೇಳಿದ್ದೇನೆ. ಬದುಕು ಎಂದು ಹೇಳುವಷ್ಟು ದೊಡ್ಡ ಮನಸ್ಸು ನನಗಿಲ್ಲ. ರಾಜ್ಯದ ಪ್ರತಿಯೊಬ್ಬರೂ ಇದೇ ರೀತಿ ಕೇಳಿದರೆ ಎಷ್ಟು ಮಂದಿಗೆ ಉತ್ತರ ಕೊಡುವುದು?’ ಎಂದು ಸಮರ್ಥಿಸಿಕೊಂಡಿದ್ದರು.</p>.<p><strong>ದೂರವಾಣಿ ಸಂಭಾಷಣೆ ವಿವರ<br />ವ್ಯಕ್ತಿ</strong>: 2.ಕೆ.ಜಿ. ಅಕ್ಕಿ ಮಾಡಿದ್ದೀರಲ್ಲಾ ಸಾಲುತ್ತಾ?<br /><strong>ಸಚಿವ</strong>: 3 ಕೆ.ಜಿ. ರಾಗಿ ಕೊಡ್ತಿದ್ದೀವಿ.</p>.<p><strong>ವ್ಯಕ್ತಿ</strong>: ನಮ್ಮ ಉತ್ತರ ಕರ್ನಾಟಕ ಭಾಗಕ್ಕೆ ರಾಗಿ ಎಲ್ಲಿ ಕೊಡುತ್ತೀರಾ?<br /><strong>ಸಚಿವ</strong>: ಉತ್ತರ ಕರ್ನಾಟಕ ಭಾಗಕ್ಕೆ ಜೋಳ ಮತ್ತು ಅಕ್ಕಿ ಮಾಡಿದ್ದೀವಿ.</p>.<p><strong>ವ್ಯಕ್ತಿ: </strong>ಸಾಲುತ್ತಾ ಸಾರ್? ಈಗ ಲಾಕ್ಡೌನ್ ಬೇರೆ ಇದೆ. ದುಡಿಮೆ ಇಲ್ಲ.<br /><strong>ಸಚಿವ</strong>: ಕೇಂದ್ರ ಸರ್ಕಾರ ಕೊಡ್ತಿದೆ. ಮೇ, ಜೂನ್ನಲ್ಲಿ 5 ಕೆ.ಜಿ. ಅಕ್ಕಿ ಕೊಡುತ್ತದೆ.</p>.<p><strong>ವ್ಯಕ್ತಿ</strong>: ಯಾವಾಗ ಕೊಡ್ತೀರಾ?<br /><strong>ಸಚಿವ</strong>: ಬರುವ ತಿಂಗಳು.</p>.<p><strong>ವ್ಯಕ್ತಿ</strong>: ಅಲ್ಲಿವರೆಗೆ ಉಪವಾಸ ಇರದಾ ಸರ್? ಸತ್ಹೋಗ್ಬಿಡೋದಾ?<br /><strong>ಸಚಿವ</strong>: ಸತ್ತು ಹೋದರೆ ಒಳ್ಳೆಯದು. ಅದಕ್ಕಿಂತ, ಅಕ್ಕಿ ಮಾರುವ ದಂಧೆ ಬಂದ್ ಮಾಡಿ. ಮತ್ತೆ ಫೋನ್ ಮಾಡಬೇಡಿ.</p>.<p><strong>ದೂರವಾಣಿ ಸಂಭಾಷಣೆಯಆಡಿಯೊ ಕೇಳಿ..</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>