‘ನ್ಯಾಯಾಲಯದ ಕಲಾಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಈ ಕುರಿತು ಎಲ್ಲ ವಕೀಲರಿಗೂ ಮಾಹಿತಿ ನೀಡಲಾಗಿದೆ. ವಕೀಲರು ಕಡ್ಡಾಯವಾಗಿ ಇ–ಮೇಲ್ ಅಥವಾ ವೆಬ್ ಪೋರ್ಟಲ್ ಮೂಲಕವೇ ತಮ್ಮ ಅರ್ಜಿ ಸಲ್ಲಿಕೆ, ವಾದ ಮಂಡನೆ ಮಾಡಬೇಕು. ಆ ಬಳಿಕವೇ ನ್ಯಾಯಾಂಗದ ಅಧಿಕಾರಿಗಳು ಮುಂದಿನ ಕ್ರಮ ಜರುಗಿಸುತ್ತಾರೆ’ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹೇಳಿದರು.