ನಗರದಲ್ಲಿ ಸೋಮವಾರ ಕಾಂಗ್ರೆಸ್ ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಭಾರತ್ ಜೋಡೋ ಯಾತ್ರೆಯಲ್ಲಿ ನನಗೆ ಹಲವು ಸತ್ಯಗಳು ತಿಳಿದಿವೆ. ನಫರತ್ ಕಿ ಮಾರ್ಕೆಟ್ ಮೇ ಮೊಹಬ್ಬತ್ ಕಿ ದುಕಾನ್ (ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ) ಇಡುವುದಾಗಿ ಯುವಜನರು ಕೂಗಿ ಹೇಳಿದ್ದಾರೆ. ಇಡೀ ದೇಶದ ಜನ ದ್ವೇಷ ಮರೆತು, ಒಂದಾಗಿ ಬಾಳಲು ಇಚ್ಚಿಸಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿದರು.