ಬಿಡದಿ ಸಮೀಪದ ಬನ್ನಿಗಿರಿಯ ಚಂದ್ರಿಕಾ ಅವರ ತಂದೆ ಹನುಮಯ್ಯ, ತಾಯಿ ಲಕ್ಷ್ಮಮ್ಮ ಕೂಲಿ ಕಾರ್ಮಿಕರು. ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಗದಷ್ಟು ಬಡತನ. ತಂದೆ ತಾಯಿ ಕಷ್ಟ ನೋಡಲು ಸಾಧ್ಯವಾಗದೆ ಪಿಯು ಮುಗಿದ ನಂತರ ಶಿಕ್ಷಣಕ್ಕೆ ತಿಲಾಂಜಲಿ ಹೇಳಿ, ಖಾಸಗಿ ಕಂಪನಿಯಲ್ಲಿ ಉದ್ಯೋಗ ಪಡೆದ ಸಹೋದರ ಅಕ್ಕನ ಓದಿಗೆ ನೆರವಾಗಿದ್ದಾನೆ.